ನವದೆಹಲಿ:- ಜಾಮೀನು ಅವಧಿ ಮುಗಿದಿದ್ದರಿಂದ ಅರವಿಂದ್ ಕೇಜ್ರಿವಾಲ್ ಅವರು ಮತ್ತೆ ತಿಹಾರ್ ಜೈಲಿಗೆ ಮರಳಿದ್ದಾರೆ.
ಲೋಕಸಭಾ ಚುನಾವಣೆಯ ಪ್ರಚಾರ ಕಾರಣಕ್ಕೆ ಕೇಜ್ರಿವಾಲ್ ಅವರಿಗೆ ಸುಪ್ರೀಂ ಕೋರ್ಟ್ ಜೂನ್ 1 ರವರೆಗೆ ಜಾಮೀನು ನೀಡಿತ್ತು. 21 ದಿನಗಳ ಜಾಮೀನು ಅವಧಿ ಮುಗಿದ ಹಿನ್ನೆಲೆಯಲ್ಲಿ ಕೇಜ್ರಿವಾಲ್ ತಿಹಾರ್ ಜೈಲಾಧಿಕಾರಿ ಎದುರು ಇಂದು ಸಂಜೆ ಶರಣಾಗಿದ್ದಾರೆ.
ನಿನ್ನೆವರೆಗೆ ಕೇಜ್ರಿವಾಲ್ ಮತ್ತೆ ಜೈಲಿಗೆ ಹೋಗುವುದನ್ನು ತಪ್ಪಿಸಲು ಕಾನೂನು ಹೋರಾಟ ನಡೆಸಿದರು. ಮಧ್ಯಂತರ ಜಾಮೀನು ವಿಸ್ತರಣೆ, ಹೊಸದಾಗಿ ಬೇಲ್ ಗಾಗಿ ಅರ್ಜಿ ಸಲ್ಲಿಸಿದ್ದರು. ಆದರೆ ದೆಹಲಿ ಕೋರ್ಟ್ ಕೇಜ್ರಿವಾಲ್ ಜಾಮೀನು ಅರ್ಜಿ ವಿಚಾರಣೆಯನ್ನು ಜೂನ್ 5ರವರೆಗೆ ಕಾಯ್ದಿರಿಸಿತು. ಅಲ್ಲಿಗೆ ಬೇರೆ ಯಾವುದೇ ದಾರಿ ಇಲ್ಲದೆ ಕೇಜ್ರಿವಾಲ್ ಜೈಲಿನತ್ತ ಮುಖ ಮಾಡಬೇಕಾಯಿತು.
ಶರಣಾಗತಿಗೂ ಮುನ್ನ ಮಾತನಾಡಿದ ಕೇಜ್ರಿವಾಲ್, ಅಧಿಕಾರ ಸರ್ವಾಧಿಕಾರವಾದಾಗ ಜೈಲು ಹೊಣೆಯಾಗುತ್ತದೆ ಎಂದು ಭಗತ್ ಸಿಂಗ್ ಹೇಳಿದ್ದರು. ದೇಶವನ್ನು ಮುಕ್ತಗೊಳಿಸಲು ಭಗತ್ ಸಿಂಗ್ ಅವರನ್ನು ಗಲ್ಲಿಗೇರಿಸಲಾಯಿತು. ಈ ಬಾರಿ ನಾನು ಜೈಲಿಗೆ ಹೋಗುತ್ತಿರುವಾಗ ನಾನು ಯಾವಾಗ ಹಿಂತಿರುಗುತ್ತೇನೆ ಎಂದು ನನಗೆ ತಿಳಿದಿಲ್ಲ. ಭಗತ್ ಸಿಂಗ್ ನನ್ನು ಗಲ್ಲಿಗೇರಿಸಿದರೆ ನಾನೂ ಗಲ್ಲಿಗೇರಲು ಸಿದ್ಧ ಎಂದರು