ಬೆಂಗಳೂರು:- ರಾಜಧಾನಿ ಬೆಂಗಳೂರಿನಲ್ಲಿ 5 ದಿನ ಭಾರಿ ಮಳೆಯಾಗುವ ಸಾಧ್ಯತೆ ಇದ್ದು ಈಗಾಗಲೇ ಮಳೆಗೆ ನಗರದ ಅನೇಕ ಕಡೆ ಭಾರಿ ಅವಾಂತರಗಳು ಸಂಭವಿಸಿವೆ
ಲೋಕಾ ಅಖಾಡದ ಕೈಮಾಕ್ಸ್ ಗೆ ಕ್ಷಣಗಣನೆ.. ಅಧಿಕಾರಿಗಳಿಂದ ಮತ ಎಣಿಕೆ ಕೇಂದ್ರ ತಪಾಸಣೆ!
ಬೆಂಗಳೂರು ನಗರದಲ್ಲಿ ನಿನ್ನೆ ತಡರಾತ್ರಿವರೆಗೂ ಭಾರಿ ಮಳೆ ಸುರಿದಿದ್ದು 29.6 ಸೆಂ.ಮೀ ಮಳೆ ದಾಖಲಾಗಿದೆ. ಬೆಂಗಳೂರಿನ ಹೆಚ್ಎಲ್ನಲ್ಲಿ ನಿನ್ನೆ 50.5 ಸೆಂ.ಮೀ. ಮಳೆಯಾಗಿದ್ದು ಇಂದು ಸಹ ಬೆಂಗಳೂರಿನ ಹಲವೆಡೆ ಮಳೆಯಾಗುವ ಸಾಧ್ಯತೆ ಇದೆ.
ಇನ್ನು ಬೆಂಗಳೂರಿನಲ್ಲಿ ನಿನ್ನೆ ರಾತ್ರಿ ಸುರಿದ ಮಳೆಯಿಂದ ಅವಾಂತರಗಳು ಸೃಷ್ಟಿಯಾಗಿವೆ. ಯಲಚೇನಹಳ್ಳಿಯ ಕನಕನಗರದಲ್ಲಿ ಮನೆಗಳಿಗೆ ಮಳೆ ನೀರು ನುಗ್ಗಿದೆ. ಬಿಬಿಎಂಪಿ ನಿರ್ಲಕ್ಷ್ಯಕ್ಕೆ 15 ವರ್ಷಗಳಿಂದ ನಿವಾಸಿಗಳು ಪರದಾಡುತ್ತಿದ್ದಾರೆ. ಹೀಗಾಗಿ ನಿವಾಸಿಗಳು ಬೆಳ್ಳಂಬೆಳಗ್ಗೆ ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಕೊಳಚೆ ನೀರು, ಮಳೆ ನೀರು, ಚರಂಡಿ ನೀರು ಬಡಾವಣೆಗೆ ಎಂಟ್ರಿ ಕೊಡ್ತಿದೆ. ಮಳೆಯಿಂದ ಏರಿಯಾದ ಗಲ್ಲಿ ಗಲ್ಲಿಯಲ್ಲೂ ರಸ್ತೆ ಕುಸಿದಿದೆ.
ಜೆ.ಪಿ.ನಗರದ ಬಳಿ ಮರ ಬಿದ್ದ ಕಾರಣ ಶಾಲಿನಿ ಜಂಕ್ಷನ್ ಕಡೆಗೆ ನಿಧಾನಗತಿಯ ಸಂಚಾರ ವಿರುತ್ತದೆ, ದಯವಿಟ್ಟು ಸಹಕರಿಸಿ ಎಂದು ಬೆಂಗಳೂರು ಸಂಚಾರ ಪೊಲೀಸರು ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ.
ಬಿಟಿಎಂ ಲೇಔಟ್ನಲ್ಲಿ ಮರ ಬಿದ್ದ ಕಾರಣ ಅರವಿಂದ ಜಂಕ್ಷನ್ ಕಡೆಗೆ ಕೂಡ ಸಂಚಾರ ನಿಧಾನಗತಿಯಲ್ಲಿ ಸಾಗುತ್ತಿದೆ.