ಅಡುಗೆ ಮನೆಯಲ್ಲಿ ಇವುಗಳು ಖಾಲಿಯಾದರೆ ಅನ್ನಪೂರ್ಣೇಶ್ವರಿ ಕೋಪದಿಂದ ಬಡತನ ಬರುತ್ತೆ.. ತಾಯಿ ಅನ್ನಪೂರ್ಣೇಶ್ವರಿಯು ಲಕ್ಷ್ಮಿ ದೇವಿಯ ರೂಪವಾಗಿದ್ದಾಳೆ ಮತ್ತು ಆಕೆ ಅಡುಗೆ ಮನೆಯಲ್ಲಿ ನೆಲೆಸಿರುತ್ತಾಳೆ. ಹಾಗಾಗಿ, ಆಕೆಯ ಕೋಪಕ್ಕೆ ಗುರಿಯಾಗದಂತೆ ನೋಡಿಕೊಳ್ಳಲು ಅಡುಗೆ ಮನೆಯಲ್ಲಿ ಕೆಲವೊಂದು ನಿಯಮಗಳನ್ನು ಅನುಸರಿಸಬೇಕೆಂದು ಉಲ್ಲೇಖಿಸಲಾಗಿದೆ.
ಕಿಂಗ್ ಕೊಹ್ಲಿ ಅಭ್ಯಾಸ ಪಂದ್ಯ ಆಡದಿರಲು ಕಾರಣ ತಿಳಿಸಿದ ಹಿಟ್ ಮ್ಯಾನ್..!
ಡುಗೆ ಮನೆಯಲ್ಲಿ ಕೆಲವು ವಸ್ತುಗಳಿದ್ದು, ಅವುಗಳು ಮುಗಿಯುವ ಮುನ್ನವೇ ತುಂಬಿಸಬೇಕು. ಅವುಗಳನ್ನು ಖಾಲಿ ಬಿಡಬಾರದು ಎಂದು ಹೇಳಲಾಗಿದೆ. ಏಕೆಂದರೆ ಅಡುಗೆ ಮನೆಯಲ್ಲಿ ಈ ವಸ್ತುಗಳು ಖಾಲಿಯಾದರೆ ಲಕ್ಷ್ಮಿ ದೇವಿಗೆ ಕೋಪ ಬರಬಹುದು. ಅಡುಗೆ ಮನೆಯಲ್ಲಿ ಯಾವ ವಸ್ತುಗಳು ಖಾಲಿಯಾಗಬಾರದು.?
1. ಅರಿಶಿನ:
ಹಿಂದೂ ಧರ್ಮದಲ್ಲಿ, ಅಡುಗೆಮನೆಯಲ್ಲಿ ಇರಿಸಲಾಗಿರುವ ಅರಿಶಿನವನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ ಮತ್ತು ಪೂಜೆಗೆ ಸಂಬಂಧಿಸಿದ ಪ್ರತಿಯೊಂದು ಕೆಲಸಗಳಲ್ಲಿ ಇದನ್ನು ಬಳಸಲಾಗುತ್ತದೆ. ಆದ್ದರಿಂದ, ಮನೆಯಲ್ಲಿ ಅರಿಶಿನ ಇಲ್ಲದಿರುವುದು ಅಶುಭ ಮತ್ತು ಇದು ಜಾತಕದಲ್ಲಿ ಗುರುದೋಷವನ್ನು ಉಂಟುಮಾಡುತ್ತದೆ. ಇದಲ್ಲದೆ, ಶುಭ ಕಾರ್ಯಗಳಲ್ಲಿ ಅಡೆತಡೆಗಳನ್ನು ಸೃಷ್ಟಿಸುತ್ತದೆ ಎನ್ನುವ ನಂಬಿಕೆಯಿದೆ.
2. ಅಕ್ಕಿ:
ಅಕ್ಕಿಯನ್ನು ವಿಶೇಷವಾಗಿ ಆಚರಣೆಗಳಲ್ಲಿ ಬಳಸಲಾಗುತ್ತದೆ ಮತ್ತು ಅಡುಗೆಮನೆಯಲ್ಲಿ ಅಕ್ಕಿಯನ್ನು ಇಟ್ಟುಕೊಳ್ಳುವುದು ಸಾಮಾನ್ಯವಾಗಿದೆ. ಆದರೆ ಅಕ್ಕಿ ಪಾತ್ರೆಯು ಸಂಪೂರ್ಣವಾಗಿ ಖಾಲಿಯಾಗಿರಬಾರದು. ಒಂದು ವೇಳೆ ಅಕ್ಕಿ ಪಾತ್ರೆಯಲ್ಲಿ ಖಾಲಿಯಾಗುತ್ತಿದ್ದರೆ ಮತ್ತೆ ಅದನ್ನು ತುಂಬಿಸಬೇಕು ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ. ಮನೆಯಲ್ಲಿ ಅಕ್ಕಿಯ ಪಾತ್ರೆ ಖಾಲಿಯಾಗಿದ್ದರೆ ತಾಯಿ ಅನ್ನಪೂರ್ಣೇಶ್ವರಿಯು ನಿಮ್ಮ ಮೇಲೆ ಕೋಪಿಸಿಕೊಂಡಿದ್ದಾಳೆ ಎಂಬರ್ಥವನ್ನು ನೀಡುತ್ತದೆ. ಶುಕ್ರದೆಸೆ ನಿಮ್ಮಿಂದ ದೂರಾಗುತ್ತದೆ. ಹಾಗೂ ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನೀವು ಎದುರಿಸಬೇಕಾಗುತ್ತದೆ.
3. ಹಿಟ್ಟು:
ಶಾಸ್ತ್ರದ ಪ್ರಕಾರ, ಅಡುಗೆಮನೆಯಲ್ಲಿ ಹಿಟ್ಟನ್ನು ಯಾವಾಗಲೂ ಹೆಚ್ಚಿನ ಪ್ರಮಾಣದಲ್ಲಿ ಇಟ್ಟುಕೊಂಡಿರಬೇಕು. ಹೀಗೆ ಮಾಡುವುದರಿಂದ ಹಿಟ್ಟು ಬೇಗನೆ ಖಾಲಿಯಾಗುವುದಿಲ್ಲ ಮತ್ತು ಅದು ಖಾಲಿಯಾಗಲು ಪ್ರಾರಂಭಿಸಿದಾಗ, ಸಮಯಕ್ಕೆ ಮುಂಚಿತವಾಗಿ ಅದನ್ನು ಪುನಃ ತುಂಬಿಸಲು ಮುಂದಾಗಿ. ವಾಸ್ತು ಪ್ರಕಾರ, ಅಡುಗೆಮನೆಯಲ್ಲಿ ಹಿಟ್ಟು ಖಾಲಿಯಾಗುವುದು ಅಶುಭ ಮತ್ತು ಅದು ಕುಟುಂಬದ ಸದಸ್ಯರ ಗೌರವಕ್ಕೆ ಧಕ್ಕೆಯನ್ನುಂಟು ಮಾಡುತ್ತದೆ
4. ಉಪ್ಪು:
ಶಾಸ್ತ್ರದ ಪ್ರಕಾರ ಅಡುಗೆ ಮನೆಯಲ್ಲಿ ಇಟ್ಟಿರುವ ಉಪ್ಪಿನ ಪೆಟ್ಟಿಗೆ ಸಂಪೂರ್ಣವಾಗಿ ಖಾಲಿ ಇರಬಾರದು. ಅದು ಖಾಲಿಯಾಗುವ ಮೊದಲು ಅದನ್ನು ಪುನಃ ತುಂಬಿಸಬೇಕು. ಮನೆಯಲ್ಲಿ ಉಪ್ಪು ಖಾಲಿಯಾಗುವುದರಿಂದ ಮನೆಯೊಳಗೆ ನಕಾರಾತ್ಮಕ ಶಕ್ತಿ ಬಂದು ವಾಸ್ತು ದೋಷಗಳನ್ನು ಸೃಷ್ಟಿಸುತ್ತದೆ.