ಬೆಂಗಳೂರು:ಕ್ಲೀನ್ ಬೆಂಗಳೂರು ಮಾಡೋಕೆ ಪಾಲಿಕೆ ಸಜ್ಜಾಗಿದ್ದು, ಗುಂಡಿ ಹಾಗೂ ಕಸ ಕಂಡು ಬಂದ್ರೆ ಎಐ ಕ್ಯಾಮರಾದಲ್ಲಿ ಸೆರೆ ಹಿಡಿದು 24 ಗಂಟೆಯೊಳಗೆ ಕ್ಲಿಯರ್ ಮಾಡೋದಕ್ಕೆ ಬಿಬಿಎಂಪಿ ಪ್ಲಾನ್ ಮಾಡಿದೆ.
ವಾಹನ ಸವಾರರಿಗೆ ಗುಡ್ ನ್ಯೂಸ್…ಜೂನ್ 12 ರವರೆಗೆ HSRP ಅಳವಡಿಸಲು ಅವಕಾಶ!
ಸಿಲಿಕಾನ್ ಸಿಟಿ ತಂತ್ರಜ್ಞಾನಕ್ಕೆ ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿದೆ. ಇತ್ತ ಪಾಲಿಕೆ ಕೂಡ ನೂತನ ತಂತ್ರಜ್ಞಾನ ಬಳಸಿಕೊಂಡು ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡೋದಕ್ಕೆ ಮುಂದಾಗಿದೆ. ನಗರದ ಜ್ವಲಂತ ಸಮಸ್ಯೆಗಳನ್ನ ಬಗೆಹರಿಸಲು ಬಿಬಿಎಂಪಿ ಹೊಸ ತಂತ್ರಜ್ಞಾನದ ಮೊರೆ ಹೊಗಿದೆ. ಇತ್ತ ರಾಷ್ಟ್ರ ಮಟ್ಟದಲ್ಲಿ ನಗರದ ಮಾನ ಹರಾಜು ಹಾಕಿದ ಬೆಂಗಳೂರಿನ ಗುಂಡಿ ಹಾಗೂ ಕಸದ ಸಮಸ್ಯೆ ಗೆ ತಂತ್ರಜ್ಞಾನ ಬಳಕೆ ಮಾಡಲು ಮುಂದಾಗಿದೆ.
ನಗರದಲ್ಲಿ ಸುಮಾರು 1,400 ಕೀ.ಮೀಟರ್ ರಸ್ತೆ ಇದ್ದು ಅವುಗಳ ಡಾಂಬರೀಕರಣ ಕಳಪೆ ಗುಣಮಟ್ಟದಾಗಿದ್ದು, ಒಂದು ಮಳೆ ಸುರಿದ್ರೆ ಸಾಕು ರಸ್ತೆಗಳು ಗುಂಡಿಮಯಾವಾಗುತ್ತೆ. ಗುಂಡಿ ಮುಚ್ಚೋದಕ್ಕೆ ಅಂತ ಪಾಲಿಕೆ ವಿದೇಶಗಳಲ್ಲಿ ಅನುಸರಿಸೋ ಎಐ ಟೆಕ್ನಾಲಜಿ ಮೊರೆ ಹೋಗ್ತಿದೆ.ಸದ್ಯ ಗುಂಡಿ ಹಾಗೂ ಕಸ ಎಲ್ಲೆಯಾದ್ರು ಕಂಡು ಬಂದ್ರೆ ಎಐ ಕ್ಯಾಮರಾ ದಲ್ಲಿ ಸೆರೆ ಹಿಡಿದು 24 ಗಂಟೆಯೊಳಗೆ ಕ್ಲಿಯರ್ ಮಾಡೋದಕ್ಕೆ ಬಿಬಿಎಂಪಿ ಮುಂದಾಗಿದೆ.
ಇನ್ನು ಎಐ ಕ್ಯಾಮರಾ ಇರೋ ವಾಹನ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚಾರ ಮಾಡಿ ರಸ್ತೆ ಗುಂಡಿಗಳು ಹಾಗೂ ಕಸದ ರಾಶಿ ಬಗ್ಗೆ
ಫೋಟೋ ಕ್ಲಿಕ್ ಮಾಡಿ ಸ್ಥಳೀಯ ಇಂಜಿನಿಯರ್ ಫೋನ್ ಗೆ ಫೋಟೋ ರವಾನೆ ಮಾಡುತ್ತೆ. ಫೋಟೋ ಬಂದ 24 ಗಂಟೆಯೊಳಗೆ ಸಂಬಂಧಪಟ್ಟ ಅಧಿಕಾರಿಗಳು ಈ ಸಮಸ್ಯೆ ಬಗೆಹರಿಸಲಿದ್ದಾರೆ. ಮುಂದಿನ ತಿಂಗಳಿಂದ ಈ ವಾಹನ ನಗರದ ಎಲ್ಲಾ ರಸ್ತೆಗಳಲ್ಲಿ ಸಂಚಾರ ಮಾಡಲಿದ್ದು ಪ್ರಾಯೋಗಿಕವಾಗಿ ವಲಯವಾರು ಇಂಜಿನಿಯರ್ ಗಳ 15 ವಾಹನಗಳಿಗೆ ಕ್ಯಾಮರಾ ಅಳವಡಿಸಲು ಪಾಲಿಕೆ ಪ್ಲಾನ್ ಮಾಡಿದೆ.
ಸದ್ಯ ಆರಂಭದಲ್ಲಿ 5 ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಹೊಸ ಪ್ಲಾನ್ ಜಾರಿಗೆ ಚಿಂತನೆ ನಡೆಸಿದ್ದು, ಈ ಮೂಲಕ ಬೆಂಗಳೂರಿನ ಗುಂಡಿ ಗಂಡಾಂತರಕ್ಕೆ ಮಂಗಳ ಹಾಡೋಕೆ ಪಾಲಿಕೆ ಪ್ಲಾನ್ ಮಾಡಿದೆ. ರಾಜಧಾನಿಯನ್ನ ಗ್ರೀನ್ ಆಂಡ್ ಕ್ಲೀನ್ ಬೆಂಗಳೂರು ಮಾಡೋಕೆ ಸಜ್ಜಾಗಿರೋ ಪಾಲಿಕೆ, ಈ ಟೆಕ್ನಾಲಜಿ ಮೂಲಕ ಬೆಂಗಳೂರಿನ ಸಮಸ್ಯೆಗಳನ್ನ ಬಗೆಹರಿಸೋಕೆ ಸಜ್ಜಾಗಿದೆ