ಬೆಂಗಳೂರು:– ಕಳೆದ ಒಂದು ವಾರದ ಅವಧಿಯಲ್ಲಿ ನಗರದಲ್ಲಿ ಉಷ್ಣಾಂಶದ ಪ್ರಮಾಣದಲ್ಲಿ ಶೇ 2-3ರಷ್ಟು ಹೆಚ್ಚಳವಾಗಿದೆ. ಒಂದು ತಿಂಗಳ ಹಿಂದೆ ಸಿಲಿಕಾನ್ ಸಿಟಿ ಕಾದ ಕೆಂಡವಾಗಿತ್ತು. ನಂತದಲ್ಲಿ ಒಂದು ವಾರಗಳ ಕಾಲ ಮಳೆಯಾಗಿ ತಂಪಾಗಿತ್ತು. ಈಗ ಮತ್ತೆ ವಾತಾವರಣ ಬದಲಾಗುತ್ತಿದೆ.
3 ಲಕ್ಷ ಲಂಚಕ್ಕೆ ಬೇಡಿಕೆ.. ಲೇಔಟ್ಗೆ ಪರವಾನಗಿ ನೀಡಲು ಲಂಚ ಕೇಳಿದ್ದ ಅಧಿಕಾರಿ “ಲೋಕಾ” ಬಲೆಗೆ!
ಕಳೆದ ವಾರ ಗರಿಷ್ಠ ಉಷ್ಣಾಂಶ 29 ರಿಂದ 30 ಡಿಗ್ರಿ ಇತ್ತು. ಈ ವಾರ ದಿಢೀರ್ ಗರಿಷ್ಠ ಉಷ್ಣಾಂಶ 3 ರಿಂದ 4 ಡಿಗ್ರಿ ಏರಿಕೆಯಾಗಿದೆ. ಜೊತೆಗೆ ಬಿಸಿಗಾಳಿ ಗಾಳಿಯ ಪ್ರಮಾಣವು ಜಾಸ್ತಿಯಾಗಿದೆ. ಅಲ್ಲದೆ, ಬೆಳಗ್ಗೆ ತಣ್ಣನೆಯ ವಾತಾವರಣ, ಮಧ್ಯಾಹ್ನ ಸುಡುಬಿಸಿಲು ಹಾಗೂ ಸಂಜೆಯಾಗುತ್ತಿದ್ದಂತೆ ತುಸು ಚಳಿಯ ಅನುಭವ ಆಗುತ್ತಿದೆ.
ಇಂತಹ ಸಂದರ್ಭದಲ್ಲಿ ಆರೋಗ್ಯದ ಮೇಲೂ ನಿಗಾ ಇಡಬೇಕಾಗಿದೆ. ಹವಾಮಾನ ವೈಪರೀತ್ಯದ ಪರಿಣಾಮ ಸರಿಯಾಗಿ ಜೀರ್ಣವಾಗದೇ ಇರುವುದು, ಶೀತ, ಕೆಮ್ಮು, ಜ್ವರ, ತಲೆ ಭಾರದಂಥ ಸಮಸ್ಯೆಗಳು ಜಾಸ್ತಿಯಾಗಿವೆ. ಜೊತೆಗೆ ವಯಸ್ಕರಲ್ಲಿ ಉಸಿರಾಟ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆಗಳೂ ಇದೆ ಎಂದು ತಜ್ಞರು ಹೇಳಿದ್ದಾರೆ.