ಬೆಂಗಳೂರು:- ರಾಜಧಾನಿ ಬೆಂಗಳೂರಿನಲ್ಲಿ ಜೂನ್ 4 ಮತ್ತು 5ರಂದು ಈ ಎರಡು ದಿನ ನೀರು ಪೂರೈಕೆಯಲ್ಲಿ ವ್ಯತ್ಯಯ ಆಗಲಿದೆ.
Karnataka weather: ಜೂನ್ 2 ರಿಂದ ಕರ್ನಾಟಕದ ಈ ಜಿಲ್ಲೆಗಳಲ್ಲಿ ಭಾರೀ ಮಳೆ..!
ಕಾವೇರಿ 5ನೇ ಹಂತದ ಕಾಮಗಾರಿ ಅನುಷ್ಠಾನ ಹಿನ್ನೆಲೆ ನಗರದ ಹಲವು ಭಾಗದಲ್ಲಿ ನೀರು ಪೂರೈಕೆ ಬಂದ್ ಆಗಲಿದೆ. ಈ 2 ದಿನಕ್ಕೆ ಸಾರ್ವಜನಿಕರು ನೀರು ಶೇಖರಿಸಿಕೊಳ್ಳಬೇಕು.
ಜೂನ್ 4 ಮತ್ತು 5ರಂದು ಬೆಳಗ್ಗೆ 6ರಿಂದ ಸಂಜೆ 6ರ ವರೆಗೆ ನೀರು ಪೂರೈಕೆ ಇರೋದಿಲ್ಲ. ಸಂಜೆ 6 ನಂತರ ನೀರು ಬರಬಹುದು ಎಂದು ತಿಳಿಸಿದೆ. ನೀರು ಪೂರೈಕೆಯಲ್ಲಿನ ಅಡಚಣೆಯನ್ನು ಬೆಂಗಳೂರು ಸಾರ್ವಜನಿಕರು ಸಹಕರಿಸುವಂತೆ BWSSB ಮನವಿ ಮಾಡಿದೆ. ನೀರು ಶೇಖರಿಸಿಕೊಳ್ಳುವಂತೆ ಸೂಚಿಸಿದೆ.
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಕಾವೇರಿ 5ನೇ ಹಂತದ ಯೋಜನೆಯ ಕಾಮಗಾರಿ ನಡೆಸಲಿದೆ. ತುರ್ತು ಕಾಮಗಾರಿ ಕೈಗೆತ್ತಿಕೊಳ್ಳುವ ಹಿನ್ನೆಲೆ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ನೀರು ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಅಂತ ಜಲಮಂಡಳಿ ಮಾಹಿತಿ ನೀಡಿದೆ.