ನವದೆಹಲಿ:- ಶಿವನಿಗೆ ನಮ್ಮ ರಕ್ಷಣೆಯ ಅಗತ್ಯವಿಲ್ಲ ಎಂದು ಹೇಳಿರುವ ದೆಹಲಿ ಹೈಕೋರ್ಟ್, ಅಕ್ರಮ ದೇಗುಲ ಧ್ವಂಸಕ್ಕೆ ತಡೆ ನೀಡಲು ನಕಾರ ಎತ್ತಿದೆ.
ಅಶ್ಲೀಲ ವಿಡಿಯೋ ಕೇಸ್… ಇಂದು ಬೆಂಗಳೂರಿಗೆ ಆಗಮಿಸಲಿದ್ದಾರೆ ಪ್ರಜ್ವಲ್! ಅದ್ದೂರಿ ಸ್ವಾಗತಕ್ಕೆ SIT ಸಿದ್ಧತೆ!
ಯಮುನಾ ನದಿಯ ಮುಳುಗಡೆ ಪ್ರದೇಶದಲ್ಲಿ ಅನಧಿಕೃತವಾಗಿ ನಿರ್ಮಿಸಲಾದ ಶಿವನ ದೇವಾಲಯವನ್ನು ತೆಗೆದುಹಾಕುವುದಕ್ಕೆ ಸಂಬಂಧಿಸಿದ ಅರ್ಜಿಯಲ್ಲಿ ಭಗವಾನ್ ಶಿವನನ್ನು ಕಕ್ಷಿದಾರರನ್ನಾಗಿ ಮಾಡಲು ನಿರಾಕರಿಸಿದ ದೆಹಲಿ ಹೈಕೋರ್ಟ್, ಪ್ರವಾಹ ಪ್ರದೇಶದ ಸಮೀಪದ ಗೀತಾ ಕಾಲೋನಿಯಲ್ಲಿರುವ ಶಿವ ದೇವಾಲಯವನ್ನು ಕೆಡವುವಂತೆ ನೀಡಿರುವ ಕುರಿತ ಆದೇಶವನ್ನು ರದ್ದುಗೊಳಿಸಲು ನಿರಾಕರಿಸಿದ್ದಲ್ಲದೇ ನ್ಯಾಯಾಲಯವು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಧರ್ಮೇಶ್ ಶರ್ಮಾ, “ದೇವಾಲಯದ ಆರಾಧ್ಯ ದೈವವಾಗಿರುವ ಶಿವನನ್ನೂ ಈ ಪ್ರಕರಣದಲ್ಲಿ ಕಕ್ಷಿದಾರರನ್ನಾಗಿ ಮಾಡಬೇಕು ಎಂದು ಅರ್ಜಿದಾರರ ಪರ ವಕೀಲರು ಅರೆಮನಸ್ಸಿನ ವಾದ ಮಂಡಿಸಿದ್ದಾರೆ. ಇದು ತನ್ನ ಸದಸ್ಯರ ಪಟ್ಟಭದ್ರ ಹಿತಾಸಕ್ತಿಗಳನ್ನು ಪೂರೈಸಲು ಇಡೀ ವಿವಾದಕ್ಕೆ ವಿಭಿನ್ನ ಬಣ್ಣ ನೀಡುವ ಹತಾಶ ಪ್ರಯತ್ನವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಶಿವನಿಗೆ ನಮ್ಮ ರಕ್ಷಣೆಯ ಅಗತ್ಯವಿದೆ ಎಂದು ಹೇಳುವುದು ಅನಗತ್ಯ’ ಎಂದು ಹೇಳಿದ ದೆಹಲಿ ಹೈಕೋರ್ಟ್, ಬದಲಿಗೆ, ನಾವು ಮತ್ತು ಇತರರು ಅವನಿಂದ ರಕ್ಷಣೆ ಮತ್ತು ಆಶೀರ್ವಾದವನ್ನು ಬಯಸುತ್ತೇವೆ. ಯಮುನಾ ನದಿಯ ತಪ್ಪಲು ಮತ್ತು ಪ್ರವಾಹ ಪ್ರದೇಶಗಳನ್ನು ಎಲ್ಲಾ ಅತಿಕ್ರಮಣಗಳು ಮತ್ತು ಅನಧಿಕೃತ ನಿರ್ಮಾಣಗಳಿಂದ ಮುಕ್ತಗೊಳಿಸಿದರೆ ಶಿವನು ಹೆಚ್ಚು ಸಂತೋಷಪಡುತ್ತಾನೆ ಎಂಬುದರಲ್ಲಿ ಸಂದೇಹವಿಲ್ಲ ಎಂದು ಕೋರ್ಟ್ ಹೇಳಿತು.
ದೇವಸ್ಥಾನವು ಆಧ್ಯಾತ್ಮಿಕ ಚಟುವಟಿಕೆಗಳ ಕೇಂದ್ರವಾಗಿದ್ದು, ಇಲ್ಲಿಗೆ ನಿತ್ಯ 300 ರಿಂದ 400 ಭಕ್ತರು ಭೇಟಿ ನೀಡುತ್ತಾರೆ ಎಂದು ಅರ್ಜಿದಾರರು ಹೇಳಿದ್ದಾರೆ. ದೇವಾಲಯದ ಆಸ್ತಿಯ ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಜವಾಬ್ದಾರಿಯುತ ನಿರ್ವಹಣೆಯನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ ಅರ್ಜಿದಾರರ ಸೊಸೈಟಿಯನ್ನು 2018 ರಲ್ಲಿ ನೋಂದಾಯಿಸಲಾಗಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಅರ್ಜಿದಾರರ ಸಮಾಜವು ತನ್ನ ಮಾಲೀಕತ್ವ, ಹಕ್ಕುಗಳು ಅಥವಾ ಆ ಜಾಗದ ಮೇಲಿನ ಆಸಕ್ತಿಯ ಬಗ್ಗೆ ಯಾವುದೇ ದಾಖಲೆಯನ್ನು ತೋರಿಸಲು ಸಂಪೂರ್ಣವಾಗಿ ವಿಫಲವಾಗಿದೆ ಮತ್ತು ದೇವಾಲಯಕ್ಕೆ ಯಾವುದೇ ಐತಿಹಾಸಿಕ ಮಹತ್ವವಿದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ನ್ಯಾಯಾಲಯ ಹೇಳಿದೆ. ದೇವಸ್ಥಾನದಲ್ಲಿ ಇರಿಸಲಾಗಿರುವ ವಿಗ್ರಹಗಳು ಮತ್ತು ಇತರ ಧಾರ್ಮಿಕ ವಸ್ತುಗಳನ್ನು ತೆಗೆದು ಬೇರೆ ದೇವಸ್ಥಾನಕ್ಕೆ ಸ್ಥಳಾಂತರಿಸಲು ಅರ್ಜಿದಾರರಿಗೆ 15 ದಿನಗಳ ಕಾಲಾವಕಾಶ ನೀಡಿದ್ದು, ಆ ಬಳಿಕ ಈ ಅಕ್ರಮ ದೇವಾಲಯ ಕೆಡಹುವಂತೆ ನ್ಯಾಯಾಲಯ ಸೂಚನೆ ನೀಡಿದೆ.