ಚಾಮರಾಜನಗರ:- ಕೊಳ್ಳೇಗಾಲ ತಾಲೂಕಿನ
ಕರಡಿಗುಡ್ಡದ ಸಮೀಪ ಸಂಶಯಾಸ್ಪದವಾಗಿ 5 ಸೀಳುನಾಯಿಗಳು ಮೃತಪಟ್ಟಿರುವ ಘಟನೆ ಜರುಗಿದೆ.
ಕೋಲಾರ: ಸಚಿವ ನಾಗೇಂದ್ರ ರಾಜೀನಾಮೆ ಕೊಡುವ ಪ್ರಶ್ನೆ ಇಲ್ಲ – ಕೋಟೆ ಶ್ರೀನಿವಾಸ್!
ಕೂಸಣ್ಣ ಎಂಬವರ ಜಮೀನಿನ ಬಳಿ ಸೀಳುನಾಯಿಗಳು ಅಸುನೀಗಿದ್ದು, ವಿಷಪ್ರಾಶನದ ಶಂಕೆ ವ್ಯಕ್ತವಾಗಿದೆ. ಸಾಕುಪ್ರಾಣಿಗಳ ರಕ್ಷಣೆಗಾಗಿ ಕೆಲವರು ಹಾಕಿದ ವಿಷಾಹಾರ ಸೇವಿಸಿ ಸೀಳುನಾಯಿ ಸಾವನ್ನಪ್ಪಿರಬಹುದು ಎಂಬ ಸಂಶಯ ವ್ಯಕ್ತವಾಗುತ್ತಿದೆ. ಅರಣ್ಯ ಅಧಿಕಾರಿಗಳು, ಪಶು ವೈದ್ಯರು ಸ್ಥಳಕ್ಕೆ ಭೇಟಿ ಕೊಟ್ಟು ಮೃತಪಟ್ಟ ನಾಯಿಗಳ ಮರಣೋತ್ತರ ಪರೀಕ್ಷೆ ನಡೆಸಿ ಕಳೆಬರಹವನ್ನು ಅಲ್ಲಿಯೇ ಮಣ್ಣು ಮಾಡಲಾಗಿದೆ ಎಂದು ತಿಳಿದು ಬಂದಿದೆ.