ಕೋಲಾರ:- ರಾಜ್ಯದ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ 87ಕೋಟಿ ರೂ. ಹಗರಣಕ್ಕೆ ಸಂಬಂಧಿಸಿದಂತೆ ಸಿ ಐ ಡಿ ತನಿಖೆಗೆ ಆದೇಶಿಸಿದೆ.
ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಹಗರಣ ಹಿನ್ನೆಲೆ.. ಮುಂಡರಗಿ ನಾಗರಾಜ್ ಸುದ್ದಿಗೋಷ್ಠಿ!
ಈ ನಿಟ್ಟಿನಲ್ಲಿ ಸಚಿವ ಬಿ.ನಾಗೇಂದ್ರ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲವೆಂದು ರಾಜ್ಯ ವಾಲ್ಮೀಕಿ ಯುವಕರ ಸಂಘದ ಪ್ರಧಾನ ಕಾರ್ಯದರ್ಶಿ ಕೋಟೆ ಶ್ರೀನಿವಾಸ್ ಅವ್ರು ಹೇಳಿದ್ರು. ಇಂದು ಹಗರಣದ ವಿಷಯವಾಗಿ ನಗರದಲ್ಲಿ ಮಾದ್ಯಮದವರೊಂದಿಗೆ ಮಾತನಾಡದ್ರು, ವಿರೋಧ ಪಕ್ಷದವರು ನಮ್ಮ ಸಮುದಾಯದ ನಾಯಕರಾದ ಸಚಿವ ಬಿ.ನಾಗೇಂದ್ರ ರಾಜೀನಾಮೆ ನೀಡಬೇಕೆಂದು ಒತ್ತಾಯಿಸುತ್ತಿರುವುದು ಖಂಡನೀಯ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಇಲಾಖೆ ಹಾಗೂ ನಿಗಮದ ವ್ಯವಹಾರಗಳಲ್ಲಿ ತಲೆ ಹಾಕದ ಸಚಿವರ ವಿರುದ್ಧ ಆರೋಪ ಮಾಡುತ್ತಿರುವ ವಿರೋಧ ಪಕ್ಷದ ರಿಗೆ ನಾಚಿಕೆಯಾಗಬೇಕು ಎಂದು ತಿಳಿಸಿದ್ರು.
ಬಿಜೆಪಿ ಆಡಳಿತಾವಧಿಯಲ್ಲಿ ಎಷ್ಟು ಹಗರಣಗಳು ನಡೆದಿಲ್ಲ. 40 ಪರ್ಸೆಂಟ್ ಸರ್ಕಾರವೆಂದು ಹಣೆಪಟ್ಟಿ ಕಟ್ಟಿಕೊಂಡ ಬಿಜೆಪಿಯನ್ನು ಜನರು ತಿರಸ್ಕರಿಸಿದ್ದಾರೆ. ನಿಗಮದ ಅಧಿಕಾರಿ ಚಂದ್ರಶೇಖರ್ ಆತ್ಮಹತ್ಯೆಗೆ ಶರಣಾಗಿರುವುದು ಹಾಗೂ 87 ಕೋಟಿ ಹಗರಣವಾಗಿರುವ ಸಂಬಂಧ ಈಗಾಗಲೇ ಸಿಎಂ, ಡಿಸಿಎಂ ಸಿಐಡಿ ತನಿಖೆಗೆ ವಹಿಸಿ ಆದೇಶಿಸಿರುವಾಗ ಸಚಿವರು ಏಕೆ ರಾಜೀನಾಮೆ ನೀಡಬೇಕೆಂದು ಎಂದು ಪ್ರಶ್ನಿಸಿದರು.
ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿಗಳು ಹಾಗೂ ಯೂನಿಯನ್ ಬ್ಯಾಂಕ್ ಅಧಿಕಾರಿಗಳ ತಪ್ಪಿನಿಂದ ಅನಧಿಕೃತ ಖಾತೆಗೆ 87 ಕೋಟಿ ರೂ. ಹಣ ವರ್ಗಾವಣೆಯಾಗಿದೆ. ಇದರ ಬಗ್ಗೆ ಸಿ ಐ ಡಿ ತನಿಖೆಗೆ ನಡೆಸುತ್ತಿದ್ದಾರೆ. ಈ ಹಗರಣದಲ್ಲಿ ಯಾರ ಭಾಗಿಯಾಗಿದ್ದಾರೋ ಕಾನೂನಿನ ರೀತಿಯಲ್ಲಿ ಶಿಕ್ಷೆಯಾಗುತ್ತದೆ ಎಂದರು.
ಈ ಸಂಧರ್ಭದಲ್ಲಿ ರಾಜ್ಯ ವಾಲ್ಮೀಕಿ ಮಹಿಳಾ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷೆ ಮಂಜುಳಾ ಶ್ರೀನಿವಾಸ್, ಜಿಲ್ಲಾ ಮುಖಂಡ ಶೇಷಾದ್ರಿ, ಯುವ ಮುಖಂಡರಾದ ಶ್ರೀನಿವಾಸಪುರ ವೆಂಕಟೇಶ್, ನಾಗರಾಜ್, ಹೋಗಳಗೆರೆ ಅಂಜಿ ಮತ್ತಿತರರು ಉಪಸ್ಥಿತರಿದ್ದರು.