ಬಾಗಲಕೋಟೆ:- ತಾಲೂಕಿನ ಗದ್ದನಕೇರಿ ಕ್ರಾಸ್ನಲ್ಲಿ ಮನೆ ಬಾಗಿಲು ತೆರೆಯದ ಪ್ರಿಯತಮೆಗೆ ಕಿಟಕಿಯಿಂದಲೇ ಪ್ರೇಮಿ ಆ್ಯಸಿಡ್ ಎರಚಿದ ಘಟನೆ ಜರುಗಿದೆ.
ಹುಡುಗಿಯರ ಪೋಟೊ ಅಶ್ಲೀಲವಾಗಿ ಮಾರ್ಫ್ ಮಾಡುತ್ತಿದ್ದ ಆರೋಪಿ ಅರೆಸ್ಟ್..!
ಮೌನೇಶ್ ಪತ್ತಾರ ಎಂಬ ಪ್ರೇಮಿ ಲಕ್ಷ್ಮಿ ಬಡಿಗೇರ ಎಂಬ ಮಹಿಳೆಗೆ ಆ್ಯಸಿಡ್ ಎರಚಿದ್ದಾನೆ. ಮಹಿಳೆಯ ಎಡಗಣ್ಣು ಮತ್ತು ಮುಖದ ಮೇಲೆ ಗಾಯವಾಗಿದೆ. ಜೊತೆಗೆ ಆಕೆಯ ಎಂಟು ವರ್ಷದ ಮಗಳ ಮುಖಕ್ಕೂ ಅಲ್ಪ ಪ್ರಮಾಣದಲ್ಲಿ ಆ್ಯಸಿಡ್ ತಗುಲಿದ್ದು, ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.
ಈ ಘಟನೆ ಕುರಿತು ಕಲಾದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಮೌನೇಶ್ ಪತ್ತಾರ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನು ಅಪಾಯದಿಂದ ಮಹಿಳೆ ಪಾರಾಗಿದ್ದಾರೆ.