ಕಾಗವಾಡ: ಕಾಗವಾಡ ಶಾಸಕ ರಾಜು ಕಾಗೆ ಎದುರಲ್ಲೆ ಕಾರ್ಯಕರ್ತನೊಬ್ಬ ಸೆಲ್ಫಿ ವಿಡಿಯೋ ಮಾಡಿ ಧಮಕಿ ಹಾಕಿದ ವಿಡಿಯೋ ಎಲ್ಲೆಡೆ ಸದ್ದು ಮಾಡಿದೆ.
ಜನಪ್ರತಿನಿದಿಗಳ ಎದುರಲ್ಲೆ ವಿಡಿಯೋ ಮಾಡಿ ಶಾಸಕರ ತಂಟೆಗೆ ಬಂದ್ರೆ ಕೈ ಕಾಲು ಮುರಿಯೋದಾಗಿ ಬೆದರಿಕೆ ಹಾಕಿದ ಕಾಂಗ್ರೆಸ್ ಕಾರ್ಯಕರ್ತನ ನಡೆಗೆ ಎಲ್ಲೆಡೆ ತೀವ್ರ ವಿರೋಧ ವ್ಯಕ್ತವಾಗಿದೆ.
ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಬೆವಣೂರು ಗ್ರಾಮದ ಗ್ರಾಮ ದೇವತೆ ಶ್ರೀ ಅಮೋಘ ಸಿದ್ದೇಶ್ವರ ಜಾತ್ರೆ ಸಂಧರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತ ಸಂತೋಷ ಚುರಮುಲೆ ಎಂಬಾತನಿಂದ ಶಾಸಕರ ಮುಂದೆ ನಿಂತು ಮಾದ್ಯಮದವರಿಗೆ ಕೈ ಕಾಲು ಮುರಿಯೋ ಬೆದರಿಕೆ ಹಾಕಿದ್ದಾರೆ. ಈ ಒಂದು ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು ಕಾಂಗ್ರೆಸ್ ಶಾಸಕ ರಾಜು ಕಾಗೆ ನಡೆಗೆ ತೀವ್ರ ವಿರೋಧ ವ್ಯಕ್ತವಾಗಿದೆ.