ಕೋಲಾರ:- ರಾಜ್ಯದಲ್ಲಿರುವ ಡೊಂಗಿ ಸರ್ಕಾರ ತೊಲಗಲಿ ಎಂದು ಮಾಜಿ ಡಿಸಿಎಂ ಅಶ್ವತ್ಥ ನಾರಾಯಣ ಹೇಳಿಕೆ ನೀಡಿದ್ದಾರೆ.
Madhu Bangarappa: ನನಗೆ ಕಟ್ಟಿಂಗ್ ಮಾಡುವವರು ಫ್ರೀ ಇಲ್ಲ, ಫ್ರೀ ಇದ್ರೆ ವಿಜಯೇಂದ್ರ ಮಾಡ್ಲಿ – ಸಚಿವ ಮಧು ಬಂಗಾರಪ್ಪ
ಈ ಸಂಬಂಧ ಮಾತನಾಡಿದ ಅವರು, ಈ ರಾಜ್ಯ ಸರ್ಕಾರ ಸಮಾಜವನ್ನ ವಿಭಜನೆ ಮಾಡುವ ಉದ್ದೇಶ ಹೊಂದಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಕೊಲೆ, ಸುಲಿಗೆ, ಕ್ರಿಮಿನಿಲ್ ಪ್ರಕರಣಗಳು ರಾಜ್ಯದಲ್ಲಿ ಹೆಚ್ಚಾಗಿದೆ. ಇದರ ಬಗ್ಗೆ ಸಿಎಂ, ಗೃಹ ಸಚಿವರು ಮಾತನಾಡುತ್ತಿಲ್ಲ. ರಾಜ್ಯದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ, ಪೊಲೀಸ್ ಇಲಾಖೆಯಲ್ಲಿ ವರ್ಗಾವಣೆ ದಂಧೆಯಾಗಿದೆ. ನಾಳೆ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ಮಾಡುತಿದ್ದೇವೆ. ಬೆಂಗಳೂರಿನಲ್ಲಿ ಮಳೆ ಸೇರಿದಂತೆ ರಾಜ್ಯದಲ್ಲಾಗಿರುವ ಮಳೆ ಅನಾಹುತ ಸೇರಿ ಸರ್ಕಾರ ನಿರ್ವಹಣೆ ಮಾಡುವಲ್ಲಿ ವಿಫಲವಾಗಿದೆ ಎಂದರು.
ಇನ್ನೂ ರಾಜ್ಯದಲ್ಲಿ ಲೋಕಸಭೆ ಚುನಾವಣೆ ಬಳಿಕ ಕಾಂಗ್ರೆಸ್ ಪತನ ವಿಚಾರವಾಗಿ ಮಾತನಾಡಿ, ಅವರಲ್ಲಿರುವ ಒಳ ಜಗಳ, ಸಿಎಂ ಸ್ಥಾನ, ಮಂತ್ರಿ ಸ್ಥಾನಕ್ಕಾಗಿ ಪೈಪೋಟಿ ಅವರ ಸರ್ಕಾರ ಪತನವಾಗಲಿದೆ. ನಾವು ಯಾವುದೆ ಆಪರೇಷನ್ ಮಾಡಲ್ಲ, ಅವರೆ ಹೇಳುತ್ತಿದ್ದಾರೆ ಸರ್ಕಾರ ಬೀಳಲಿದೆ. ಈ ಸರ್ಕಾರಕ್ಕೆ ಕಿವಿ ಹಿಂಡುವ ಕೆಲಸ ಮಾಡುತ್ತಾ ಇರುವುದೆ ನಮ್ಮ ಆಪರೇಷನ್. ಬೆಂಗಳೂರು ಗ್ರಾಮಾಂತರದಲ್ಲಿ ನೂರಕ್ಕೆ ಸಾವಿರ ಪರ್ಸೆಂಟ್ ಸಂಸದರಾಗಿ ಡಾ. ಮಂಜುನಾಥ್ ಆಯ್ಕೆಯಾಗಲಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿ ಅನ್ವಯ ಎಲ್ಲರಿಗೂ ಸಿಬಿಎಸ್ ಇ ಪಠ್ಯ ಬೇಕು ಎನ್ನುವುದಿದೆ. ಬಡವರ ವಿರೋಧಿ, ಶಿಕ್ಷಣ ವಿರೋಧಿಯಾದವರು ಮುಖ್ಯ ಮಂತ್ರಿಯಾಗಿದ್ದಾರೆ. ಸಚಿವರು, ರಾಜಕಾರಣಗಳ ಶಾಲೆಗಳೆಲ್ಲಾ ಸಿಬಿಎಸ್ ಇ ಶಾಲೆಗಳಿವೆ. ಎಲ್ಲರಿಗೂ ಉತ್ತಮ ಶಿಕ್ಷಣ ಸಿಗಬೇಕು ಅನ್ನೋದೆ ನಮ್ಮ ಉದ್ದೇಶ. ಇವರದ್ದು ಕೆಟ್ಟ ಆಡಳಿತ, ಡೊಂಗಿ ಸರ್ಕಾರ ತೊಲಗಲಿ ಅನ್ನೋದೆ ನಮ್ಮ ಉದ್ದೇಶ. ಬಿಜೆಪಿ ಎಲ್ಲಾ ಜಾತಿ ಜನಾಂಗಕ್ಕೆ ಸೇರಿದೆ, ನಮ್ಮಲ್ಲಿ ಯಾವುದೆ ತಾರತಮ್ಯ ಇಲ್ಲ. ಈಶ್ಬರಪ್ಪ ಅವರು ಸಹ ಮೋದಿ ಫೋಟೊ ಹಾಕಿಕೊಂಡೆ ಚುನಾವಣೆ ಮಾಡಿದ್ದಾರೆ. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದಾರೆ ಅಷ್ಟೆ. ಪೆನ್ ಡ್ರೈವ್ ಹಂಚಿರುವ ಮಹಾನ್ ನಾಯಕರನ್ನೆ ನೀವು ಕೇಳಿ. ರಾಜ್ಯದಿಂದ ಹೊರ ಹೋಗಲು ಅನುವು ಮಾಡಿಕೊಟ್ಟಿದ್ದು ಯಾರು. ಸಿಎಂ ಆಗಿ ಹೇಗೆ ನಡೆದುಕೊಳ್ಳಬೇಕು ಅನ್ನೋದೆ ಅವರಿಗಿಲ್ಲ. ಅಮಾಯಕ ಹೆಣ್ಣು ಮಕ್ಕಳ ಮರ್ಯಾದೆಯನ್ನ ಬೀದಿಗೆ ತಂದಿದ್ದು ಈ ಸರ್ಕಾರ. ಕಾನೂನು ಪಾಲನೆ ಮಾಡುವಲ್ಲಿ ಇವರ ವಿಫಲರಾಗಿದ್ದಾರೆ. ಕಾನೂನು ಸುವ್ಯವಸ್ಥೆ ಹಾಳು ಮಾಡಿದ್ದು ಕಾಂಗ್ರೆಸ್. ಹಾಸನ ಜಿಲ್ಲಾಡಳಿತವನ್ನ ಬಳಿಸಿಕೊಂಡು ಹೀಗೆ ಮಾಡಲಾಗಿದೆ ಎಂದು ಕೋಲಾರದಲ್ಲಿ ಮಾಜಿ ಉಪ ಮುಖ್ಯಮಂತ್ರಿ ಅಶ್ವತನಾರಾಯಣ ಹೇಳಿಕೆ ನೀಡಿದ್ದಾರೆ.