ಕೆ.ಆರ್.ಪುರ: ಬೆಂಗಳೂರಿನ ರಾಮಮೂರ್ತಿನಗರದ ಕಲ್ಕೆರೆ ಕೆರೆಯಲ್ಲಿ ಸಾವಿರಾರು ಮೀನುಗಳ ಮಾರಣಹೋಮವಾದ ಘಟನೆ ನಡೆದಿದೆ.
Hubballi: ರೈಲ್ವೆ ಮೇಲ್ಸೇತುವೆಯಲ್ಲಿ ಹೆಡ್ ಕಾನ್ಸ್ ಟೇಬಲ್ ಆತ್ಮಹತ್ಯೆ!
ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಬಾರಿ ಮಳೆ ಮತ್ತು ಪರಿಸರಲ್ಲಾದ ವ್ಯತ್ಯಾಸಗಳಿಂದ ಆಮ್ಲಜನಕದ ಕೊರತೆ ಹಿನ್ನೆಲೆಯಲ್ಲಿ ಮೀನುಗಳು ಸಾವನ್ನಪ್ಪಿದೆ ಎಂಬ ಶಂಕೆ ವ್ಯಕ್ತವಾಗಿದೆ.
ಸಾವಿರಾರು ಮೀನುಗಳು ಸಾವನ್ನಪ್ಪಿರುವ ಸಂಬಂಧಿಸಿದಂತೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಗಮನ ಹರಿಸುವಂತೆ ಸ್ಥಳೀಯ ನಿವಾಸಿಗಳು ಒತ್ತಾಯಿಸಿದ್ದಾರೆ.
ಕಳೆದೆರಡು ದಿನಗಳಲ್ಲಿ ನೂರಾರು ಮೀನುಗಳು ಸಾವನ್ನಪ್ಪಿದ್ದು ಕೆರೆಯ ಸುತ್ತಮುತ್ತ ವಾಸನೆ ತುಂಬಿದೆ. ಇದರಿಂದ ವಾಯುವಿಹಾರಿಗಳು ಬೆಳಿಗ್ಗೆ ಮತ್ತು ಸಂಜೆ ವಾಕ್ ಮಾಡಲು ಈ ಕೆರೆಗೆ ಬರಲು ಹಿಂಜರಿಯುತ್ತಿದ್ದಾರೆ.
ಬಿಬಿಎಂಪಿ ಅಧಿಕಾರಿಗಳು ಕೂಡಲೇ ಈ ಬಗ್ಗೆ ಕ್ರಮ ಕೈಗೊಂಡು ಕೆರೆ ಸ್ವಚ್ಛಗೊಳಿಸಬೇಕು ಎಂದು ಸ್ಥಳೀಯ ನಿವಾಸಿ ಪ್ರವೀಣ್ ಮನವಿ ಮಾಡಿದ್ದಾರೆ.
ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಮೀನಿಗಾರಿಕೆ ಮಾಡಿತ್ತಿರುವ ಗುತ್ತಿಗೆದಾರರು ಮೀನುಗಳ ಸಾವಿನಿಂದ ಕಂಗಾಳಾಗಿದ್ದು,ಇತ್ತೀಚೆಗೆ ನಾಲ್ಕೈದು ಟನ್ ಮೀನುಗಳನ್ನ ಬಿಟ್ಟಿದು ಉತ್ತಮ ಗಾತ್ರದಲ್ಲಿ ಅವುಗಳ ಬೆಳವಣಿಗೆ ಆಗಿತ್ತು.ಆದರೆ ಆಮ್ಲಜನಕ ಕೊರತೆ ಉಂಟಾಗಿ ಎರಡು ಟನ್ ಗೂ ಹೆಚ್ಚಿನ ಮೀನುಗಳನ್ನ ಸಾವನ್ನಪ್ಪಿದೆ
ಎಂದು ಗುತ್ತಿಗೆದಾರ ವಿನಯ್ ತಿಳಿಸಿದರು.
ಜಲಮೂಲಕ್ಕೆ ಹೊರಮಾವು, ಕಲ್ಕೆರೆ ಹಾಗೂ ಹೆಬ್ಬಾಳ, ನಾಗವಾರ ಕಡೆಗಳಿಂದ ಕೊಳಚೆ ನೀರು ಸೇರುತ್ತಿತ್ತು. ಇದನ್ನು ತಪ್ಪಿಸುವ ಉದ್ದೇಶದಿಂದ ಹೊರಮಾವು ಭಾಗದಲ್ಲಿ 2 ಕೋಟಿ ಲೀಟರ್ ಸಾಮರ್ಥ್ಯದ ಕೊಳಚೆ ನೀರು ಶುದ್ಧೀಕರಣ ಘಟಕವನ್ನು (ಎಸ್ಟಿಪಿ) ಜಲಮಂಡಳಿಯು ಸ್ಥಾಪಿಸಿದೆ. ಇಲ್ಲಿ ಪ್ರತಿದಿನ 2 ಕೋಟಿ ಲೀಟರ್ ತ್ಯಾಜ್ಯ ನೀರು ಶುದ್ಧೀಕರಿಸಿ ಕೆರೆಗೆ ಬಿಡಲಾಗುತ್ತಿದೆ.ವಾಯು ವಿಹಾರಿಗಳಿಗೆ ಮತ್ತು ಪರಿಸರ ಪ್ರೇಮಿಗಲಿಗೆ ಸುಂದರವಾದ ಕೆರೆಯಾಗಿದೆ.