ಗೆಲ್ಲಬೇಕಾಗಿರುವುದು ಐಪಿಎಲ್ ಟ್ರೋಫಿ ಹೊರತು ಆರೆಂಜ್ ಕ್ಯಾಪ್ ಅಲ್ಲ ಎಂದು ಅನಗತ್ಯವಾಗಿ ಅಂಬಾಟಿ ರಾಯುಡು ಅವರು ಕೊಹ್ಲಿಯ ಕಾಲೆಳೆದಿದ್ದಾರೆ.
ಊಟದ ಬಳಿಕ ಬೆಲ್ಲ ತಿನ್ನುತ್ತೀರಾ!?.. ಈ ಸಮಸ್ಯೆ ನಿಮ್ಮ ಬಳಿ ಸುಳಿಯಲ್ಲ!
ಹೈದರಾಬಾದ್ ತಂಡದ ವಿರುದ್ಧ ಕೋಲ್ಕತಾ ನೈಟ್ ರೈಡರ್ಸ್ ಎಂಟು ವಿಕೆಟ್ಗಳ ಜಯ ಸಾಧಿಸಿ ಟ್ರೋಫಿ ಗೆದ್ದುಕೊಂಡಿತು. ಕೆಕೆಆರ್ ಬಳಗಕ್ಕೆ ಇದು ಒಟ್ಟು ಮೂರನೇ ಟ್ರೋಫಿ. ಹೀಗಾಗಿ ಎಲ್ಲರ ಗಮನ ಕೆಕೆಆರ್ ತಂಡದ ಮೇಲೆ ನೆಟ್ಟಿತ್ತು. ಎಲ್ಲರೂ ಆ ತಂಡದ ಅಟಗಾರರ ಮತ್ತು ಒಟ್ಟು ಪ್ರದರ್ಶನದ ಮೇಲೆ ಬೆಳಕು ಚೆಲ್ಲುತ್ತಿದ್ದರು. ಆದರೆ, ಭಾರತೀಯ ಕ್ರಿಕೆಟ್ ಕ್ಷೇತ್ರ ಕಂಡ ಅತ್ಯಂತ ತರ್ಲೆ ಹಾಗೂ ಅಧಿಕಪ್ರಸಂಗಿ ಕ್ರಿಕೆಟಿಗ ಅಂಬಾಟಿ ರಾಯುಡು ಮಾತ್ರ ಅನಗತ್ಯವಾಗಿ ಕೊಹ್ಲಿ ಹಾಗೂ ಆರ್ಸಿಬಿ ವಿಚಾರಕ್ಕೆ ಮೂಗು ತೂರಿಸಿದರು. ಅವರು ಪ್ರಶಸ್ತಿ ಗೆಲುವಿನ ಅಭಿಯಾನದಲ್ಲಿ ಕೆಕೆಆರ್ ಆಟಗಾರರ ಕೊಡುಗೆಯ ಬಗ್ಗೆ ಮಾತನಾಡುವ ಬದಲು ಕೊಹ್ಲಿಯ ಕಾಲೆಳೆಯಲು ತಮ್ಮ ಅಮೂಲ್ಯ ಸಮಯವನ್ನು ಮೀಸಲಿಟ್ಟರು.
ಟೂರ್ನಿಯಲ್ಲಿ ಸುನಿಲ್ ನರೈನ್ ಕೆಕೆಆರ್ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. ಅವರ ಹೆಸರಿನಲ್ಲಿ 15 ಪಂದ್ಯಗಳಲ್ಲಿ 488 ರನ್ ಗಳಿವೆ. ಫಿಲ್ ಸಾಲ್ಟ್ 435 ರನ್ ಗಳಿಸಿದರೆ, ವೆಂಕಟೇಶ್ ಅಯ್ಯರ್ ಮತ್ತು ಶ್ರೇಯಸ್ ಅಯ್ಯರ್ ಕ್ರಮವಾಗಿ 370 ಮತ್ತು 354 ರನ್ ಗಳಿಸಿದರು. ಪಂದ್ಯಾವಳಿಯನ್ನು ಗೆಲ್ಲಲು, ತಂಡವು ಒಬ್ಬ ವ್ಯಕ್ತಿಯನ್ನು ಅವಲಂಬಿಸಲು ಸಾಧ್ಯವಿಲ್ಲ ಎಂದು ರಾಯುಡು ಹೇಳಿದರು. ಇದನ್ನು ವಿವರಿಸುವಾಗ, ರಾಯುಡು ಅಂತಿಮವಾಗಿ ಭಾರತದ ಸ್ಟಾರ್ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿಯನ್ನು ತರಾಟೆಗೆ ತೆಗೆದುಕೊಂಡರು. ಆರೆಂಜ್ ಕ್ಯಾಪ್ ಗೆದ್ದರೆ ಸಾಲದು. ಫ್ರಾಂಚೈಸಿಗೆ ಐಪಿಎಲ್ ಟ್ರೋಫಿ ಗೆಲ್ಲಬೇಕು ಎಂದು ಹೇಳಿದರು. ಕೊಹ್ಲಿ ಈ ವಿಚಾರದಲ್ಲಿ 17 ವರ್ಷಗಳಿಂದ ಸತತವಾಗಿ ಪ್ರಯತ್ನ ಮಾಡುತ್ತಿದ್ದರೂ ಉಳಿದ ಆಟಗಾರರಿಂದ ಅವರಿಗೆ ಹೆಚ್ಚಿನ ಬೆಂಬಲ ದೊರೆಯದ ಕಾರಣ ಟ್ರೋಫಿ ಸಿಕ್ಕಿಲ್ಲ ಎಂಬುದೇ ಬೇಸರ
“ನರೈನ್, ರಸೆಲ್ ಮತ್ತು ಸ್ಟಾರ್ಕ್ ಅವರಂತಹ ದಿಗ್ಗಜರ ಪರವಾಗಿ ನಿಂತಿದ್ದಕ್ಕಾಗಿ ಮತ್ತು ತಂಡದ ಗೆಲುವಿನಲ್ಲಿ ತಮ್ಮ ಕೊಡುಗೆ ನೀಡಿದ ಕೆಕೆಆರ್ ತಂಡಕ್ಕೆ ಅಭಿನಂದನೆಗಳು. ಒಂದು ತಂಡವು ಐಪಿಎಲ್ ಅನ್ನು ಗೆಲ್ಲುವುದು ಹೀಗೆ. ನಾವು ಇದನ್ನು ಹಲವು ವರ್ಷಗಳಿಂದ ನೋಡಿದ್ದೇವೆ. ಆಟಗಾರ ಗೆಲ್ಲಬೇಕಾಗಿರುವುದು ಐಪಿಎಲ್ ಟ್ರೋಫಿ. ಆರೆಂಜ್ ಕ್ಯಾಪ್ ಅಲ್ಲ. ತಲಾ 300 ರನ್ಗಳ ಕೊಡುಗೆಗಳು (ಅನೇಕ ಆಟಗಾರರ) ಟ್ರೋಫಿ ತಂದುಕೊಡುತ್ತದೆ “ಎಂದು ರಾಯುಡು ಸ್ಟಾರ್ ಹೇಳಿದರು