ತುಮಕೂರು:– ಪೊಲೀಸರು ಮತ್ತು ತಹಶೀಲ್ದಾರರ ಸಹಕಾರದೊಂದಿಗೆ ದಲಿತರು ದೇವಾಲಯ ಪ್ರವೇಶಿಸಿದ ಘಟನೆ ತುಮಕೂರು ಜಿಲ್ಲೆ, ತುರುವೇಕೆರೆ ತಾಲೂಕಿನ ಕುಣಿಕೇನಹಳ್ಳಿ ಗ್ರಾಮದಲ್ಲಿ ಜರುಗಿದೆ.
ಹುಬ್ಬಳ್ಳಿ: ರೈಲ್ವೆ ಸೌಲಭ್ಯಕ್ಕಾಗಿ ನೈಋತ್ಯ ವಲಯದ ಪ್ರಧಾನ ವ್ಯವಸ್ಥಾಪಕರಿಗೆ ಮನವಿ..!
ಗ್ರಾಮದ ಕೆಂಪಮ್ಮ ದೇವಿ ದೇವಾಲಯದೊಳಗೆ ತೆರಳಿ ಸ್ಥಳೀಯರು ಪೂಜೆ ಸಲ್ಲಿಸಿದ್ದಾರೆ. ಕೆಂಪಮ್ಮ ದೇವಾಲಯಕ್ಕೆ ಹಿಂದಿನಿಂದಲೂ ದಲಿತರಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು. ಈ ಬಗ್ಗೆ ದಲಿತ ಸಮುದಾಯದ ಯುವಕರು ನಮಗೂ ಒಳ ಪ್ರವೇಶಕ್ಕೆ ಅವಕಾಶ ಕಲ್ಪಿಸಿ ಎಂದು ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಯುವಕರ ಮನವಿಗೆ ಸ್ಪಂದಿಸಿ ನಿನ್ನೆ ರಾತ್ರಿ ದೇವಾಲಯ ಪ್ರವೇಶಕ್ಕೆ ಅಧಿಕಾರಿಗಳು ಅವಕಾಶ ಮಾಡಿಕೊಟ್ಟಿದ್ದಾರೆ.
ಗ್ರಾಮದಲ್ಲಿ ಸಭೆ ನಡೆಸಿ ಇನ್ನು ಮುಂದೆ ದಲಿತರು ದೇವಾಲಯದ ಒಳಗೆ ಪೂಜೆ ಸಲ್ಲಿಸಬೇಕು ಎಂದು ಅಧಿಕಾರಿಗಳು ಹೇಳಿದ್ದಾರೆ.