T20 ವಿಶ್ವಕಪ್ ಕಪ್ ಹಿನ್ನೆಲೆ ಭಾರತೀಯ ಕ್ರಿಕೆಟಿಗರ ಮೊದಲ ಗುಂಪು ಅಮೆರಿಕಕ್ಕೆ ಪ್ರಯಾಣಿಸಿದೆ. ಆದರೆ ಹಾರ್ದಿಕ್ ಪಾಂಡ್ಯ ಮಾತ್ರ ಕಾಣುತ್ತಿಲ್ಲ. ಪಾಂಡ್ಯ – ನತಾಶಾ ದಂಪತಿ ಪ್ರತ್ಯೇಕಗೊಂಡಿದ್ದಾರೆ ಎಂಬ ಮಾಹಿತಿ ಹರಡುತ್ತಿರುವ ನಡುವೆಯೇ ಅವರು ನಾಪತ್ತೆಯಾಗಿದ್ದಾರೆ.
ಭಾರತ ತಂಡದ ಮೊದಲ ನಿಯೋಗದ ಆಟಗಾರರು ನ್ಯೂಯಾರ್ಕ್ಗೆ ತೆರಳುವ ವಿಮಾನ ಹಿಡಿಯುವ ಮೊದಲು ತಂಡವು ದುಬೈಗೆ ಹಾರಲಿದ್ದಾರೆ. ಅಲ್ಲೀಂದ ಯುಎಸ್ಎಗೆ ಪ್ರಯಾಣ ಮಾಡಿ ಅಭ್ಯಾಸ ಪಂದ್ಯ ಸಮೇತ ವಿಶ್ವ ಕಪ್ ಗೆಲ್ಲುವ ಹಾದಿಯಲ್ಲಿ ತಮ್ಮ ಶ್ರಮ ವಹಿಸಲಿದ್ದಾರೆ.
ಹಾರ್ದಿಕ್ ಪಾಂಡ್ಯ ಐಪಿಎಲ್ನಲ್ಲಿ ಉತ್ತಮ ಪ್ರದರ್ಶನ ನೀಡಿಲ್ಲ.. ಆದಾಗ್ಯೂ ಅವರು ವೇಗದ ಬೌಲಿಂಗ್ ಆಲ್ರೌಂಡರ್ ಆಯ್ಕೆಯಾಗಿ ತಂಡದಲ್ಲಿ ಅವಕಾಶ ಪಡೆದಿದ್ದಾರೆ. ಇದು ಸ್ವಲ್ಪ ಮಟ್ಟಿಗೆ ಚರ್ಚೆಯ ಸಂಗತಿಯಾಯಿತು. ಇದೀಗ ಅವರ ಇರುವಿಕೆ ಪತ್ತೆಯಾಗದ ಕಾರಣ ಹೇಗೆ ಆಡುವರೆಂಬ ಚರ್ಚೆ ಶುರುವಾಗಿದೆ
ಐಪಿಎಲ್ ಫ್ರಾಂಚೈಸಿ ಮುಂಬೈ ಇಂಡಿಯನ್ಸ್ ಪ್ಲೇಆಫ್ಗೆ ಪ್ರವೇಶಿಸಲು ವಿಫಲವಾಯಿತು. 10ನೇ ಸ್ಥಾನ ಪಡೆದು ಹೀನಾಯ ಪ್ರದರ್ಶನವೊಂದಿಗೆ ಅಭಿಯಾನ ಅಂತ್ಯಗೊಳಿಸಿತು. ಅಲ್ಲಿಂದ ಬಳಿಕ ಅವರು ಎಲ್ಲಿದ್ದಾರೆ ಎಂಬ ಮಾಹಿತಿ ಇಲ್ಲ. ಐಪಿಎಲ್ನ 17 ನೇ ಋತುವಿನಲ್ಲಿ ಹಾರ್ದಿಕ್ ಪಾಂಡ್ಯ ದಯನೀಯವಾಗಿ ವಿಫಲರಾದರು. ಎಂಐ ಪಾಯಿಂಟ್ಸ್ ಟೇಬಲ್ನಲ್ಲಿ ಕೊನೇ ಸ್ಥಾನದಲ್ಲಿತ್ತು. ಆ ವೇಳೆ ಅವರ ಪ್ರದರ್ಶನದ ಬಗ್ಗೆ ಮಾತ್ರ ಚರ್ಚೆನಡೆಯುತ್ತಿತ್ತು. ಇದೀಗ ಅವರ ದಾಂಪತ್ಯ ಜೀವನದ ಬಗ್ಗೆ ಜೋರು ಚರ್ಚೆ ನಡೆಯುತ್ತಿವೆ
ಹಾರ್ದಿಕ್ ಪಾಂಡ್ಯ ಅಥವಾ ನತಾಶಾ ಈ ಬಗ್ಗೆ ಹೇಳಿಕೆ ನೀಡಿ್ಲ. ಪಾಂಡ್ಯ ತರಬೇತಿಗಾಗಿ ಲಂಡನ್ಗೆ ಹೋಗಿದ್ದಾರೆ ಮತ್ತು ಅಲ್ಲಿಂದ ನೇರವಾಗಿ ತಂಡ ಸೇರಿಕೊಳ್ಳಲಿದ್ದಾರೆ ಎಂದು ವರದಿಗಳು ಸೂಚಿಸಿವೆ. ಆದರೆ, ಅದಕ್ಕೆ ಒಂದು ಖಾತರಿ ಇಲ್ಲದಾಗಿದೆ. ರಾಜಸ್ಥಾನ್ ರಾಯಲ್ಸ್ ಆಟಗಾರರಾದ ಸಂಜು ಸ್ಯಾಮ್ಸನ್, ಯಜುವೇಂದ್ರ ಚಾಹಲ್, ಅವೇಶ್ ಖಾನ್ ಮತ್ತು ಯಶಸ್ವಿ ಜೈಸ್ವಾಲ್ ಎರಡನೇ ಬ್ಯಾಚ್ನಲ್ಲಿ ಹೋಗಲಿದ್ದಾರೆ