ಹುಬ್ಬಳ್ಳಿ:- ಪ್ರಜ್ವಲ್ ದೇಶ ಬಿಡುವಂತೆ ಮಾಡಿದ್ದು ಕಾಂಗ್ರೆಸ್ ಸರ್ಕಾರ ಎಂದು ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
Breaking :ಸರ್ಕಾರಿ ಐಬಿಯಲ್ಲಿ ಎಣ್ಣೆ ಪಾರ್ಟಿ ಮಾಡಿದ್ದ ಐವರು ಅಧಿಕಾರಿಗಳು ಸಸ್ಪೆಂಡ್!
ಈ ಸಂಬಂಧ ಮಾತನಾಡಿದ ಅವರು, ಪ್ರಜ್ವಲ್ ಪಾಸ್ಪೋರ್ಟ್ ರದ್ದತಿ ವಿಚಾರದಲ್ಲಿ ವಿಳಂಬ ಮಾಡ್ತಿಲ್ಲ. ಸಾಮಾನ್ಯ ವ್ಯಕ್ತಿಯ ಪಾಸ್ಪೋರ್ಟ್ ರದ್ದತಿಗೂ ಒಂದು ಪ್ರಕ್ರಿಯೆ ಇರುತ್ತೆ. ಆ ಪ್ರಕ್ರಿಯೆ ಬಿಟ್ಟು ನಾವು ಏನೂ ಮಾಡಲು ಬರುವುದಿಲ್ಲ. ಪ್ರಧಾನಿ, ವಿದೇಶಾಂಗ ಸಚಿವರು ಸೇರಿ ಯಾರಿಗೇ ಪತ್ರ ಬರೆದರೂ ಆಗಲ್ಲ. ಯಾರ ಮೇಲೆ ಏನು ಆರೋಪ ಇದೆ, ಎಫ್ಐಆರ್ನಲ್ಲಿ ಏನಿದೆ?. ಎಲ್ಲಾ ವಿಚಾರಗಳನ್ನು ಕೇಂದ್ರ ಸರ್ಕಾರಕ್ಕೆ ಪೊಲೀಸ್ ಇಲಾಖೆಗೆ ನೀಡಬೇಕು.
ಸಿಎಂ ಸಿದ್ದರಾಮಯ್ಯ ಪತ್ರ ಬರೆದು ರಾಜಕೀಯ ಮಾಡಿದ್ರೆ ಆಗಲ್ಲ. ಪ್ರಜ್ವಲ್ ವಿರುದ್ಧ ಆರೋಪ ಬಂದಾಗಿಂದಲೂ ಬಂಧಿಸುವಂತೆ ಒತ್ತಾಯ ಮಾಡಿದ್ದೇವೆ. ಆತನ ವಿಚಾರದಲ್ಲಿ ಕದ್ದುಮುಚ್ಚಿ ಮಾತಾಡಿಲ್ಲ. ಆದರೆ, ಸರ್ಕಾರ ತಮ್ಮ ತಪ್ಪು ಮುಚ್ಚಿಕೊಳ್ಳಲು ಕೇಂದ್ರ ವಿರುದ್ಧ ಆರೋಪ ಮಾಡುತ್ತಿದೆ ಎಂದು ಆರೋಪ ಮಾಡಿದರು.