ಮಂಡ್ಯ:- ಕಾವೇರಿ ಜಲಾನಯನ ಪ್ರದೇಶದಲ್ಲಿ ಕೃತಿಕಾ ಮಳೆಯ ಅಬ್ಬರ ಹಿನ್ನಲೆ ಜಿಲ್ಲೆಯ ಕೆ.ಆರ್.ಎಸ್ ಜಲಾಶಯದ ಒಳ ಹರಿವಿನಲ್ಲಿ ಭಾರೀ ಹೆಚ್ಚಳವಾಗಿದೆ.
ಕೆಸರಿನಲ್ಲಿ ಮುಳುಗಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ವ್ಯಕ್ತಿ ರಕ್ಷಣೆ….ಪೊಲೀಸರ ಕಾರ್ಯಕ್ಕೆ ಭರಪೂರ ಮೆಚ್ಚುಗೆ!
ಡ್ಯಾಂ ನ ಒಳ ಹರಿವು 3.500ಕ್ಯೂಸೆಕ್ ಗೆ ಹೆಚ್ಚಿದೆ. ಒಳ ಹರಿವು ಹೆಚ್ಚಳದಿಂದ ನೀರಿನ ಮಟ್ಟ ಕೂಡ 83 ಅಡಿಗೆ ಏರಿಕೆಯಾಗಿದೆ. ಕಳೆದ ನಾಲ್ಕೈದು ತಿಂಗಳುಗಳಿಂದ ಒಳಹರಿವಿನ ಮಟ್ಟ ತೀವ್ರ ಕುಸಿತ ಕಂಡಿತ್ತು. ಮಳೆ ಇಲ್ಲದೆ 50 ಕ್ಯೂಸೆಕ್ಸ್ ಗೆ ಇಳಕೆ ಕಂಡು ಸಾಕಷ್ಟು ಆತಂಕ ಮೂಡಿಸಿತ್ತು.
ಕಳೆದ ನಾಲ್ಕೈದು ದಿನಗಳಿಂದ ಕೃತಿಕಾ ಮಳೆಯ ಅಬ್ಬರದಿಂದ ಒಳ ಹರಿವಿನಲ್ಲಿ ಹೆಚ್ಚಳವಾಗಿದೆ. ಒಳ ಹರಿವಿನ ಹೆಚ್ಚಳದಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ಕೆ.ಆರ್.ಎಸ್ ಡ್ಯಾಂ ಇದಾಗಿದೆ.
ಡ್ಯಾಂನ ಇಂದಿನ ನೀರಿನ ಮಟ್ಟದ ವಿವರ
Max Level: 124.80 Ft.
Today’s lvl :83.30 Ft.
Max Cap : 49.452 TMC
Today’s cap: 11.837 TMC
Live cap. 3.458 TMC
Inflow:3565 cusecs
Outflow: 528 cusecs(including water supply)