ಬೆಂಗಳೂರು: ಕಾರು ಅಪಘಾತದಿಂದ ಚೇತರಿಸಿ ಬರೋಬ್ಬರಿ ಒಂದು ವರ್ಷ ನಂತರ ಸ್ಪರ್ಧಾತ್ಮಕ ಕ್ರಿಕೆಟ್ಗೆ ಮರಳಿದ ರಿಷಭ್ ಪಂತ್ ವಿಕೆಟ್ಕೀಪಿಂಗ್ನಲ್ಲೂ ಸೈ ಎನಿಸಿಕೊಂಡರಲ್ಲದೆ, ಬ್ಯಾಟಿಂಗ್ನಲ್ಲಿ 40.55ರ ಸರಾಸರಿಯಲ್ಲಿ 155.40ರ ಸ್ಟ್ರೈಕ್ರೇಟ್ನಲ್ಲಿ 446 ರನ್ಗಳನ್ನು ಬಾರಿಸಿದ್ದಾರೆ. ಆದರೂ ಸಂಜು ಸ್ಯಾಮ್ಸನ್ ಬದಲಿಗೆ ರಿಷಭ್ ಪಂತ್ ಅವರನ್ನೇ ಆಯ್ಕೆ ಮಾಡಬೇಕು ಎಂದು ಯುವಿ ಬ್ಯಾಟ್ ಬೀಸಿದ್ದಾರೆ. “ನಾನು ರಿಷಭ್ ಪಂತ್ ಅವರನ್ನೇ ಆಯ್ಕೆ ಮಾಡಿಕೊಳ್ಳುತ್ತೇನೆ. ಏಕೆಂದರೆ ಆತ ಎಡಗೈ ಬ್ಯಾಟರ್.
Aadhar Card ಬಳಕೆದಾರರಿಗೆ ಎಚ್ಚರಿಕೆ ನೀಡಿದ UIDAI.! ʻಆಧಾರ್ʼ ದುರ್ಬಳಕೆ ಮಾಡಿದ್ರೆ ಕಾದಿದೆ ಕಠಿಣ ಶಿಕ್ಷೆ
ಸಂಜು ಸ್ಯಾಮ್ಸನ್ ಕೂಡ ಉತ್ತಮ ಆಟಗಾರ. ಆದರೆ ತಂಡದ ಸಂಯೋಜನೆಗೆ ರಿಷಭ್ ಪಂತ್ ಆಯ್ಕೆಯೇ ಸರಿಯಾದ ನಿರ್ಧಾರ,” ಎಂದು ಐಸಿಸಿ ವಿಶೇಷ ಸಂದರ್ಶನದಲ್ಲಿ ಯುವರಾಜ್ ಸಿಂಗ್ ಹೇಳಿದ್ದಾರೆ. “ರಿಷಭ್ ಪಂತ್ ಅದ್ಭುತ ಪ್ರತಿಭೆಯ ಆಟಗಾರ. ಆತನಿದ್ದರೆ ಭಾರತ ತಂಡಕ್ಕೆ ಹಲವು ಪಂದ್ಯಗಳನ್ನು ಗೆದ್ದುಕೊಡಬಲ್ಲ. ಪ್ರಮುಖ ಪಂದ್ಯಗಳಲ್ಲಿ ಅಬ್ಬರಿಸುವ ಸಾಮರ್ಥ್ಯ ಆತನಲ್ಲಿದೆ. ಟೆಸ್ಟ್ ಕ್ರಿಕೆಟ್ನಲ್ಲಿ ಇದನ್ನು ಮಾಡಿ ತೋರಿಸಿದ್ದಾರೆ. ಟಿ20 ವಿಶ್ವಕಪ್ನಲ್ಲೂ ಅವರು ಇದನ್ನು ಮರುಕಳಿಸಬಹುದು,” ಎಂದಿದ್ದಾರೆ.