ಬಳ್ಳಾರಿ:- ಜಿಲ್ಲೆಯ ಸಂಡೂರು ತಾಲೂಕಿನ ತೋರಣಗಲ್ಲು ಗ್ರಾಮದಲ್ಲಿ ಶ್ರೀ ಶಂಕರಲಿಂಗ ದೇವರು ಈ ಭಾಗದಲ್ಲಿ ಅತ್ಯಂತ ಪ್ರಮುಖ ದೇವರಾಗಿದ್ದು, ಅನೇಕರ ಮನೆದೈವನಾಗಿದ್ದಾನೆ.
IPL 2024: 7 ಪಂದ್ಯಗಳ ಸತತ ಗೆಲುವು… RCBಗೆ ಆಟಕ್ಕೆ ನಿಕೋಲಸ್ ಪೂರನ್ ಫಿದಾ..!
ಪ್ರತಿವರ್ಷ್ ಈ ಹುಣ್ಣಿಮೆಯ ದಿನದಂದು ಶ್ರೀ ಶಂಜರಲಿಂಗ ದೇವರ ಉತ್ಸವ ಮೂರ್ತಿಗೆ ರಥೋತ್ಸವ ನಡೆಸಲಾಗುತ್ತದೆ. ರಥೋತ್ಸವ ಹಿನ್ನೆಲೆಯಲ್ಲಿ ದೇವರಿಗೆ ಬೆಳಗಿನಿಂದಲೇ ಅನೇಕ ಪೂಜಾ ಕಾರ್ಯಕ್ರಮಗಳು ನಡೆದವು.
ಸಂಜೆ ದೇವಸ್ಥಾನದ ಆವರಣದಲ್ಲಿನ ರಥಕ್ಕೆ ಪಲ್ಲಕ್ಕಿ ಸೇವೆ ಮುಖಾಂತರ ಉತ್ಸವ ಮೂರ್ತಿಯನ್ನು ತಂದು ರಥದಲ್ಲಿರಿಸಿ ತೇರನ್ನು ಪಾಜಾಕಟ್ಟೆಯವರೆಗೂ ಭಕ್ತಿಯಿಂದ ದೇವರಿಗೆ ಘೋಷಣೆಗಳನ್ನು ಹಾಕುತ್ತಾ ರಥೋತ್ಸವವನ್ನು ಸಂಜೆ ಆರು ಮೂವತ್ತರ ಸಮಯದಲ್ಲಿ ಶರದ್ಧಾಭಕ್ತಿಗಳಿಂದ ಆಚರಿಸಲಾಯಿತು. ಅದ್ದೂರಿಯಿಂದ ಜರಗಿದ ಈ ರಥೋತ್ಸವಕ್ಕೆ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ಸಾವಿರಾರು ಭಕ್ತಾದಿಗಳು ಶಂಕರ ಲಿಂಗ ಜಾತ್ರೆಯಲ್ಲಿ ಪಾಲ್ಗೊಂಡು ದೇವರಿಗೆ ಕಾಯಿ ಕರ್ಪೂರ ನೀಡಿದರು..