ಹೊಸಕೋಟೆ: ಬೆಂಗಳೂರು ಗ್ರಾಮಾಂತರ ಹೊಸಕೋಟೆ ಪಟ್ಟಣದ ದಕ್ಷಿಣ ಪಿನಾಕಿನಿ ತೀರದಲ್ಲಿ ನೆಲೆಸಿರುವ ಇತಿಹಾಸ ಪ್ರಸಿದ್ದ ಅವಿಮುಕ್ತೇಶ್ವರ ಬ್ರಹ್ಮರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಡಗರ ಸಂಭ್ರಮದಿಂದ ನಡೆಯಿತು.
ಕಿಡ್ನಿ ಸ್ಟೋನ್ ಆಗಿದ್ಯಾ!?.. ಹಾಗಿದ್ರೆ ಖಾಲಿ ಹೊಟ್ಟೆಯಲ್ಲಿ ಈ ಹಣ್ಣು ಸೇವಿಸಿ!
ಸಂಸದ ಬಿ.ಎನ್. ಬಚ್ಚೇಗೌಡ, ಶಾಸಕ ಶರತ್ ಬಚ್ಚೇಗೌಡ ರಥೋತ್ಸವ ಆಡಳಿತ ಮಂಡಳಿಯವರು ಪೂಜೆ ಸಲ್ಲಿಸಿ ವಿವಿಧ ಕಲಾಡಗಳೊಂದಿಗೆ ಉತ್ಸವ ಮೂರ್ತಿಯನ್ನು ಮೆರವಣಿಗೆಲ್ಲಿ ತಂದು ತೇರಿನಲ್ಲಿ ಕೂರಿಸುತ್ತಿದ್ದಂತೆ ಗೋವಿಂದ ನಾಮಸ್ಪರಣೆ ಹಾಗೂ ಜನರ ಜರ್ಷೋದ್ಘಾರ ಮುಗಿಲುಮುಟ್ಟಿದ್ದು, ಸಾವಿರಾರು ಭಕ್ತರ ಸಮ್ಮುಖದಲ್ಲಿ ರಥೋತ್ಸವ ಜರುಗಿತು.
ಈ ಸಂದರ್ಭದಲ್ಲಿ ಭಕ್ತರು ತಮ್ಮ ಇಷ್ಟಾರ್ಥಗಳು ನೆರವೇರಲಿ ಎಂದು ನೆನೆದು ರಥಕ್ಕೆ ಬಾಳೆಹಣ್ಣು ಎಸೆದರು. ಇದೇ ಸಂದರ್ಭದಲ್ಲಿ ಹಲವರು ಭಕ್ತರಿಗೆ ಅನ್ನದಾನ ಪಾನಕ ಮಜ್ಜಿಗೆ ವಿತರಿಸಿದರು.