ಕೃಷ್ಣೆಯ ಒಡಲು ಬರಿದಾಗಿರುವುದರಿಂದ ಹಿಪ್ಪರಗಿ ಜಲಾಶಯ ಹಿನ್ನೀರು ನಂಬಿರುವ ಬಾಗಲಕೋಟೆ ಹಾಗು ಬೆಳಗಾವಿ ಜಿಲ್ಲೆಗಳ ಹಲವಾರು ನಗರ ಹಾಗು ಗ್ರಾಮಗಳಿಗೆ ಕುಡಿಯುವ ನೀರಿಗೆ ತತ್ವಾರ.ಹೌದು ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ಅವಳಿ ನಗರಕ್ಕೆ ಈಗಾಗಲೇ ನೀರಿನ ಕೊರತೆ ಎದುರಾಗಿದೆ.ಜನರು ಖಾಸಗಿ ಕೊಳವೆ ಬಾವಿ ಹಾಗು ನಗರಸಭೆಯ ಕೊಳವೆ ಬಾವಿಗಳನ್ನೇ ಅವಲಂಬಿಸಿದ್ದಾರೆ.
ಇದೇ ಸಮಸ್ಯೆ ಮುಂದುವರೆದರೆ ಕೊಳವೆ ಬಾವಿಗಳೂ ಸಹಿತ ಬತ್ತಿ ಹೋಗುವ ಸಾಧ್ಯತೆ ಹೆಚ್ಚಾಗಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ.ಅಲ್ಲಲ್ಲಿ ಸರ್ಕಾರಿ ಹಾಗು ಖಾಸಗಿ ಕೊಳವೆ ಬಾವಿಗಳ ಮೂಲಕ ನೀರು ಸರಬರಾಜಾಗುತ್ತಿದೆ. ಕೆಲ ಕಡೆ ಖಾಸಗಿ ವ್ಯಕ್ತಿಗಳು ಕೊಳವೆ ಬಾವಿಯಿಂದ ನೀರು ಪೂರೈಕೆದಾರರ ವಿದ್ಯುತ್ ಬಿಲ್ ನಗರಸಭೆಯೇ ಕಟ್ಟಲಿದ್ದು, ಆತಂಕಪಡುವ ಅಗತ್ಯವಿಲ್ಲವೆಂದರು.
ಕೃಷ್ಣೆ ಕಾಲಿ
ಮಹಾರಾಷ್ಟ್ರದ ಜಲಾಶಯದಲ್ಲಿ ಸದ್ಯ 64 ಟಿಎಂಸಿಯಷ್ಟು ನೀರು ಮಾತ್ರವಿದೆಯೆಂಬ ಮಾಹಿತಿಯಿದೆ.103 ಟಿಎಂಸಿಯಷ್ಟು ಸಾಮರ್ಥ್ಯ ಹೊಂದಿರುವ ಕೋಯ್ನಾ ಜಲಾಶಯದಲ್ಲಿ ನೀರಿನ ಮಟ್ಟ ಇಳಿಕೆಯಾಗಿರುವದು ಮಹಾರಾಷ್ಟ್ರ ಹಾಗು ಕರ್ನಾಟಕ ರೈತರಲ್ಲಿ ಆತಂಕ ಹೆಚ್ಚಿಸಿದೆ.ಜೂನ್ ತಿಂಗಳ ಮೊದಲ ವಾರದಲ್ಲಿ ಕೊಂಕಣ ಭಾಗದಲ್ಲಿ ಮಳೆಯಾಗುತ್ತಿತ್ತು.
ಆದರೆ ಸದ್ಯದ ಪರಿಸ್ಥಿತಿಯಲ್ಲಿ ಮಳೆಯಿಲ್ಲದೆ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ದಟ್ಟವಾಗಿದೆ.ನೀರಿಲ್ಲದಒಣಗಿದ ಬೆಳೆಗಳುಸಾಲ ಮಾಡಿಕೊಂಡು ಬೆಳೆಸಿದ ಕಬ್ಬು ರೈತನ ಹೊಟ್ಟೆಯ ಮೇಲೆ ಬರೆ ಎಳೆದಂತಾಗಿದೆ. ಕಳೆದೆರಡು 4 ವರ್ಷಗಳಲ್ಲಿ ಕೊರೊನಾ, ಅತಿವೃಷ್ಟಿಯಿಂದ ಕೆಂಗೆಟ್ಟಿರುವ ರೈತನಿಗೆ ಈಗ ಮಳೆಯಾಗದೇ ದೊಡ್ಡ ಸಮಸ್ಯೆಯ ಸುಳಿಗೆ ಸಿಲುಕಿದ್ದಾನೆ.
ಪ್ರಕಾಶ ಕುಂಬಾರ
ಬಾಗಲಕೋಟೆ