ಚಾಮರಾಜನಗರ: ಎಟಿಎಂನಲ್ಲಿ ಹಣ ಡ್ರಾ ವೇಳೆ ರೈತನಿಗೆ ಹಣ ವಂಚನೆ ಮಾಡಿರುವ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ಪಟ್ಟಣದ ಕೆನರಾ ಬ್ಯಾಂಕ್ ನ ಎಟಿಎಮ್ ನಲ್ಲಿ ನಡೆದಿದೆ. ಹನೂರು ತಾಲ್ಲೂಕಿನ ಕುರಟ್ಟಿಹೊಸುರು ಗ್ರಾಮದ ರೈತ ಬಸವರಾಜು ಹಣ ಕಳೆದುಕೊಂಡಂತಹ ವ್ಯಕ್ತಿಯಾಗಿದ್ದು, ರೈತ ಬಸವರಾಜು ಹನೂರು ಪಟ್ಟಣದ ಕೆನರಾ ಬ್ಯಾಂಕ್ ನ ಎಟಿಎಂ ಗೆ ಆಗಮಿಸಿ ನನಗೆ ಹಣ ಪಡೆಯಲು ತಿಳಿದಿಲ್ಲ ನನಗೆ ಹಣ ತೆಗೆದುಕೊಳ್ಳಲು ಸಹಾಯ ಮಾಡಿ ಎಂದು ಅಪರಿಚಿತ ವ್ಯಕ್ತಿ ಬಳಿ ಕೇಳಿದಾಗ ಈ ಘಟನೆ ನಡೆದಿದೆ.
Railway Jobs: ರೈಲ್ವೆ ಇಲಾಖೆಯಲ್ಲಿ ಬಂಪರ್ ಉದ್ಯೋಗಾವಕಾಶ..! ತಿಂಗಳಿಗೆ 56,000 ಸಂಬಳ
ರೈತ ಕೇಳಿದ 5000 ರೂ ಹಣವನ್ನು ತೆಗದು ಕೂಟ್ಡು ನಂತರ ಎಟಿಎಂನ್ನ ಬದಲಿಸಿ, ಕೋಡ್ ನ್ನು ತಿಳಿದು ಬೇರೆ ಎಟಿಎಂನ್ನು ರೈತನಿಗೆ ನೀಡಿ ಪರಾರಿಯಾಗಿದ್ದಾನೆ. ರೈತ ಬಸವರಾಜ್ ಖಾತೆಯಿಂದ ಬರೊಬ್ಬರಿ 61000 ರೂ ಲಪಾಟಿಸಿದ್ದಾನೆ. ಈ ಸಂಬಂಧ ಹಣ ಕಳೆದುಕೊಂಡ ರೈತ ಬಸವರಾಜ್ ಪೋಲಿಸರಿಗೆ ದೂರು ನೀಡಿದ್ದು, ಹನೂರು ಪೋಲಿಸ್ ಠಾಣೆಯಲ್ಲಿ ಕೂಡ ಪ್ರಕರಣ ದಾಖಲು ಮಾಡಲಾಗಿದೆ.