ಚಾಮರಾಜನಗರ/ಗುಜರಾತ್:- ಕಳೆದ ಒಂದು ತಿಂಗಳಿಂದೆ ನಾಪತ್ತೆಯಾಗಿದ್ದ ಮಾನಸಿಕ ಅಸ್ವಸ್ಥರು ಗುಜರಾತ್ನಲ್ಲಿ ಪತ್ತೆಯಾದ ಘಟನೆ ಗುಜರಾಜತನ ಬುಜ್ ಜಿಲ್ಲೆಯಲ್ಲಿ ಜರುಗಿದೆ.
CSK V/s RCB: ಚಿನ್ನಸ್ವಾಮಿಯಲ್ಲಿ ಕಿಂಗ್ ಕೊಹ್ಲಿಯ ಸಾಧನೆ..! ಏನು ಗೊತ್ತಾ!?
ಇರ್ಷದ್ ಹಾಗೂ ನಾಗರಾಜ್ ಮಾನಸಿಕ ಅಸ್ವಸ್ತರೆಂದು ಹೇಳಲಾಗಿದೆ. ನಾಗರಾಜ ಕುಟುಂಬ ಚಾಮರಾಜನಗರದ ಮೇದಾರ ಬೀದಿಯಲ್ಲಿ ವಾಸವಾಗಿದೆ. ಇನ್ನು ಇರ್ಷದ್ ಕುಟುಂಬಸ್ಥರು ನಗರದ ಗುಂಡ್ಲುಪೇಟೆ ಸರ್ಕಲ್ ಬಳಿ ಇರುವ ಗಾಳಿಪುರದಲ್ಲಿ ವಾಸವಾಗಿದ್ದಾರೆ. ಇರ್ಷದ್ ಹಾಗೂ ನಾಗರಾಜ್ ಕುಟುಂಬ ಬಡತನದಿಂದ ಕೂಡಿದ್ದು, ಇವರಿಗೆ ಚಿಕಿತ್ಸೆ ಕೊಡಿಸಲು ಪೋಷಕರಿಗೆ ಸಾಧ್ಯವಾಗಿಲ್ಲ. ಇನ್ನು ನಾಗರಾಜ ಮತ್ತು ಇರ್ಷದ್ ಪ್ರತಿನಿತ್ಯ ಊರಲ್ಲಿ ಸುತ್ತಾಡುತ್ತಾ ಸಾಯಂಕಾಲ ಮನೆ ಕಡೆಗೆ ಮರುಳುತ್ತಿದ್ದರು. ಅಲ್ಲದೆ ಕೆಲವು ಸಲ ಈ ಇಬ್ಬರೂ ಮನೆ ಬಿಟ್ಟು 2-3 ದಿನಗಳ ಕಾಲ ಹೋಗಿದ್ದು ಇದೆ. ಆಗ ಅಪರಚಿತ ವ್ಯಕ್ತಿಗಳನ್ನು ಮನೆಗೆ ತಂದು ಬಿಡುತ್ತಿದ್ದರು. ಅಥವಾ ತಾವೇ ಮನೆಗೆ ಬರುತ್ತಿದ್ದರು.
ಹೀಗೆ, ಕಳೆದ ಒಂದು ತಿಂಗಳ ಹಿಂದೆ ಮನೆಯಿಂದ ಹೊರಗಡೆ ಹೋದ ನಾಗರಾಜ ಮತ್ತಿ ಇರ್ಷದ್ 2-3 ದಿನ ಕಳೆದರೂ ಮನೆಗೆ ಮರಳಲಿಲ್ಲ. ಇದರಿಂದ ಆತಂಕಗೊಂಡ ಇವರ ಪೋಷಕರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪೊಲೀಸರು ಹುಡುಕಾಟ ನಡೆಸಿದ್ದರು ಕೂಡ ಪತ್ತೆಯಾಗಿರಲಿಲ್ಲ. ಇದರಿಂದ ಈ ಇಬ್ಬರ ಕುಟುಂಬಸ್ಥರು ಆತಂಕಗೊಂಡಿದ್ದರು.
ಇದೀಗ, ಇಬ್ಬರೂ ಬುಜ್ ಜಿಲ್ಲೆಯಲ್ಲಿ ಪತ್ತೆಯಾಗಿದ್ದು, ಅಲ್ಲಿನ ಪೊಲೀಸರು ಇವರನ್ನು ಮಾನವ ಜ್ಯೋತಿ ವಸತಿ ಕೇಂದ್ರದಲ್ಲಿರಿಸಿದ್ದಾರೆ. ಬಳಿಕ ಇವರ ಹಿನ್ನಲೆ ತಿಳಿದುಕೊಂಡು, ಜ್ಯೋತಿ ವಸತಿ ಕೇಂದ್ರದ ಸಿಬ್ಬಂದಿ ಚಾಮರಾಜನಗರ ಜಿಲ್ಲಾಧಿಕಾರಿಗೆ ಮಾಹಿತಿ ನೀಡಿದ್ದಾರೆ. ಈ ವಿಚಾರವನ್ನು ಜಿಲ್ಲಾಧಿಕಾರಿಗಳು ನಾಗರಾಜ ಮತ್ತು ಇರ್ಷಾದ ಕುಟುಂಬಕ್ಕೆ ತಿಳಿಸಿದ್ದಾರೆ