ಬೆಂಗಳೂರು: ಕಳೆದ ರಾತ್ರಿ ಅಪರಿಚಿತ ಬೈಕ್ ವೊಂದು ಡಿಕ್ಕಿ ಹೊಡೆದ ಪರಿಣಾಮ, ಪ್ರಶ್ನೆ ಮಾಡಿದ್ದಕ್ಕೆ ಅಂಗಡಿ ಮಾಲೀಕನಿಗೆ ತಲೆಗೆ ಮತ್ತು ಕೈಗೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಇಂಡ್ಲವಾಡಿ ಕ್ರಾಸ್ನ ಬಳಿ ನಡೆದಿದೆ.. ಇಂಡ್ಲವಾಡಿ ಗ್ರಾಮದ ಶಿವು ಎಂಬಾತನಿಗೆ ಹಲ್ಲೆ ಮಾಡಿದ್ದು ಎನ್ನಲಾಗಿದೆ ಹಲ್ಲೆ ಮಾಡಿದ ಅರೋಪಿಗಳು ಆನೇಕಲ್ ತಾಲೂಕಿನ ಎಲ್ಲಮ್ಮನಪಾಳ್ಯದ ಪುಡಿ ರೌಡಿಗಳು ಎನ್ನಲಾಗಿದೆ ..
ಹೌದು ಬೆಂಗಳೂರು ಹೊರವಲಯದ ಆನೇಕಲ್ ತಾಲ್ಲೂಕಿನ ಇಂಡ್ಲವಾಡಿ ಕ್ರಾಸ್ ಬಳಿ ಸಂಜೆ ಎಂಟು ಗಂಟೆ ಸುಮಾರಿಗೆ ಅಪರಿಚಿತ ಬೈಕ್ ವೊಂದು ರಸ್ತೆ ಬದಿಯಲ್ಲಿ ಇದ್ದ ಸಿತಾ ಭೈರವೇಶ್ವರ ಪ್ರಾವಿಷನ್ ಸ್ಟೋರ್ ಮುಂದೆ ಬೈಕ್ ನಿಲ್ಲಿಸಲಾಗಿದ್ದ ಆ ಬೈಕ್ ಗೆ ಅಪಘಾತ ನಡೆದಿದೆ ..ಇನ್ನು ಅಪಘಾತ ವಿಚಾರ ವಾಗಿ ಪ್ರಾವಿಷನ್ ಸ್ಟೋರ್ ನಲ್ಲಿದ್ದ ಮಾಲಿಕ ಶಿವು ಎಂಬಾತ ಪ್ರಶ್ನೆ ಮಾಡಿದ್ದಾನೆ ಇದೆ ವಿಚಾರಕ್ಕೆ ಗಲಾಟೆ ನಡೆದು ಅಪರಿಚಿತ ಯುವಕರು ಆತನ ಮೇಲೆ ಹಲ್ಲೆ ಮಾಡಿದ್ದಾರೆ.. ಇನ್ನು ಹಲ್ಲೆ ಮಾಡಿ ಎಸ್ಕೇಪ್ ಆಗಿದ್ದಾರೆ,
Monsoon: ಯಾವುದೇ ಕಾರಣಕ್ಕೂ ಮಳೆಗಾಲದಲ್ಲಿ ಈ ತರಕಾರಿಗಳನ್ನು ತಿನ್ನಬೇಡಿ..!
ಇನ್ನು ಗಾಯಾಳು ಶಿವನನ್ನ ಆನೇಕಲ್ ಸರ್ಕಾರಿಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಇನ್ನು ಹಲ್ಲೇ ಮಾಡಿದ ಆರೋಪಿಗಳ ಬಗ್ಗೆ ಮಾಹಿತಿ ಕಲೆ ಹಾಕಲಾಗಿದೆ ಇನ್ನು ಹಲ್ಲೇ ಮಾಡುತ್ತಿರುವ ದೃಶ್ಯಾವಳಿ ಅಲ್ಲಿನ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.. ಮತ್ತೆ ಆನೇಕಲ್ ನಲ್ಲಿ ಪುಡಿ ರೌಡಿಗಳ ಹಾವಳಿ ಹೆಚ್ಚಾಗಿದೆ ಕಾನೂನಿನ ಭಯ ಇಲ್ಲದಂತಾಗಿದೆ ಸಾರ್ವಜನಿಕ ಕೂಡ ಪೊಲೀಸರಿಗೆ ಇಡೀ ಶಾಪ ಹಾಕುತ್ತಿದ್ದಾರೆ.ಅ ಇನ್ನು ಪೊಲೀಸ್ರು ಆರೋಪಿಗಳ ಪತ್ತೆಗಾಗಿ ಬಲೆ ಬಿಸಿದ್ದಾರೆ ಈ ಸಂಬಂಧ ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..