ಹಾಸನ:– ಅತ್ಯಾಚಾರ ಆರೋಪ ಕೇಸ್ನಲ್ಲಿ ಬಂಧನವಾಗಿದ್ದ ದೇವರಾಜೇಗೌಡ ಪೊಲೀಸ್ ಕಸ್ಟಡಿ ಮುಗಿಸಿ ಹಾಸನ ಜಿಲ್ಲಾ ಕಾರಾಗೃಹಕ್ಕೆ ಹಸ್ತಾಂತರ ಮಾಡಲಾಯಿತು. ಈ ವೇಳೆ ಪೊಲೀಸ್ ವ್ಯಾನ್ನಲ್ಲೇ ಮಾಧ್ಯಮದವರ ಮುಂದೆ ಮಾತನಾಡಿದ ಅವರು, ತನಗೆ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ವೈರಲ್ ಕೇಸ್ನಲ್ಲಿ ಎಚ್ಡಿ ಕುಮಾರಸ್ವಾಮಿ ಹೆಸರೇಳಲು 100 ಕೋಟಿ ಆಫರ್ ಮಾಡಿದ್ದರು ಹೇಳಿದ್ದಾರೆ.
Karnataka Weather: ಮುಂದಿನ 4 ದಿನಗಳು ಈ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ಕೊಟ್ಟ ಹವಾಮಾನ ಇಲಾಖೆ!
ಪ್ರಜ್ವಲ್ ರೇವಣ್ಣ ಪೆನ್ಡ್ರೈವ್ ಕೇಸ್ನಲ್ಲಿ ಕುಮಾರಸ್ವಾಮಿ ಅವರನ್ನ ಸೃಷ್ಟಿಕರ್ತ ಎಂದು ಬಿಂಬಿಸಲು ನನಗೆ ಡಿಕೆ ಶಿವಕುಮಾರ್ 100 ಕೋಟಿ ಆಫರ್ ನೀಡಿದ್ದರು. ಇದಕ್ಕಾಗಿ ಅವರ ಸರ್ಕಾರದ ಸಚಿವರಾದ ಚಲುವರಾಯಸ್ವಾಮಿ, ಕೃಷ್ಣಬೈರೇಗೌಡ, ಪ್ರಿಯಾಂಕ ಖರ್ಗೆ, ಇನ್ನೊಬ್ಬ ಸಚಿವರ ಮೂಲಕ ನನಗೆ ಆಫರ್ ಕೊಟ್ಟಿದ್ದರು ನನಗೆ ನೂರು ಕೋಟಿ ಹಣದ ಆಫರ್ ನೀಡಿದ್ದರು. ಅಡ್ವಾನ್ಸ್ ಆಗಿ 5 ಕೋಟಿ ಹಣವನ್ನ ಬೌರಿಂಗ್ ಕ್ಲಬ್ ಕಳಿಸಿದ್ದರು. ಆದರೆ ನಾನು ಅದನ್ನ ಒಪ್ಪಲಿಲ್ಲ ಅದಕ್ಕೆ ನನ್ನನ್ನ ಮಟ್ಟಹಾಕಬೇಕೆಂದು ಈಗೆಲ್ಲಾ ಮಾಡಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.