ಲಕ್ನೋ:- ನನ್ನ ಮಗನನ್ನು ನಿಮ್ಮ ಕೈಗೆ ನೀಡುತ್ತಿದ್ದೇನೆ ಎಂದು ಹೇಳುವ ಮೂಲಕ ರಾಹುಲ್ ಗೆಲುವಿಗೆ ಜನರಲ್ಲಿ ಸೋನಿಯಾ ಗಾಂಧಿ ಮನವಿ ಮಾಡಿದ್ದಾರೆ.
ನಮ್ಮ ಕುಟುಂಬದ ಬೇರುಗಳು ಈ ನೆಲದ ಮಣ್ಣಿನೊಂದಿಗೆ ಸಂಪರ್ಕ ಹೊಂದಿವೆ. ಈ ಸಂಬಂಧವು ಗಂಗಾ ಮಾತೆಯಷ್ಟು ಪರಿಶುದ್ಧವಾಗಿದೆ. ನಮ್ಮ ಸಂಬಂಧವು ಅವಧ್ ಮತ್ತು ರಾಯ್ಬರೇಲಿಯ ರೈತರ ಆಂದೋಲನದಿಂದ ಪ್ರಾರಂಭವಾಗಿದೆ ಎಂದು ತಿಳಿಸಿದ್ದಾರೆ
ದುರ್ಬಲರನ್ನು ರಕ್ಷಿಸಿ, ನ್ಯಾಯದ ವಿರುದ್ಧ ಹೋರಾಡಿ ಮತ್ತು ಪವಿತ್ರವಾಗಿರಿ. ಇದು ಇಂದಿರಾಗಾಂಧಿ ಅವರ ಬೋಧನೆಯಾಗಿದೆ. ಅವರು ಕೆಲಸ ಮಾಡುವುದನ್ನು ನಾವು ಹತ್ತಿರದಿಂದ ನೋಡಿದ್ದೇವೆ. ನನ್ನ ಅವಧಿಯಲ್ಲೂ ಇದೇ ಸಿದ್ಧಾಂತವನ್ನು ಪಾಲಿಸಿದ್ದೇನೆ. ನಿಮ್ಮ ಪ್ರೀತಿ ನನ್ನ ಏಕಾಂಗಿ ಎನಿಸಲು ಬಿಡಲಿಲ್ಲ. ನನ್ನ ಬಳಿ ಇರುವುದೆಲ್ಲ ನಿಮ್ಮದೇ. ಈಗ ನನ್ನ ಮಗನನ್ನು ನಿಮಗೆ ನೀಡುತ್ತಿದ್ದೇನೆ. ನಾನು ನೀಡಿದಂತೆ ಅವನಿಗೂ ನೀವು ಪ್ರೀತಿ ನೀಡಿ. ರಾಹುಲ್ ನಿಮ್ಮನ್ನು ಎಂದಿಗೂ ನಿರಾಶೆ ಮಾಡುವುದಿಲ್ಲ ಎಂದು ಜನರಲ್ಲಿ ಮನವಿ ಮಾಡಿದ್ದಾರೆ. ಇಂದಿರಾ ಗಾಂಧಿ ಮತ್ತು ರಾಯ್ಬರೇಲಿ ಜನರು ನನಗೆ ಕಲಿಸಿದ ಪಾಠವನ್ನೇ ನಾನು ರಾಹುಲ್ ಮತ್ತು ಪ್ರಿಯಾಂಕಾ ಅವರಿಗೆ ಕಲಿಸಿದೆ. ಎಲ್ಲರನ್ನೂ ಗೌರವಿಸಲು, ದುರ್ಬಲರನ್ನು ರಕ್ಷಿಸಲು, ಜನರ ಹಕ್ಕುಗಳಿಗಾಗಿ ಅನ್ಯಾಯದ ವಿರುದ್ಧ ಹೋರಾಡಲು ಭಯಪಡಬೇಡಿ. ಏಕೆಂದರೆ ನಿಮ್ಮ ಹೋರಾಟದ ಬೇರುಗಳು ಮತ್ತು ಸಂಪ್ರದಾಯಗಳು ತುಂಬಾ ಆಳವಾಗಿವೆ ಎಂದು ತಮ್ಮ ಮಕ್ಕಳಿಗೆ ಕಿವಿಮಾತು ಹೇಳಿದ್ದಾರೆ.
ಬಹಳ ದಿನಗಳು ನಿಮ್ಮ ನಡುವೆ ಇರುವ ಅವಕಾಶ ಸಿಕ್ಕಿರುವುದಕ್ಕೆ ನನಗೆ ಸಂತೋಷವಾಗಿದೆ. ತುಂಬು ಹೃದಯದಿಂದ ನಾನು ನಿಮಗೆ ಕೃತಜ್ಞಳಾಗಿದ್ದೇನೆ. ನನ್ನ ತಲೆ ನಿಮ್ಮ ಮುಂದೆ ಗೌರವದಿಂದ ಬಾಗುತ್ತದೆ. 20 ವರ್ಷಗಳ ಕಾಲ ಸಂಸದೆಯಾಗಿ ಸೇವೆ ಸಲ್ಲಿಸಲು ನನಗೆ ಅವಕಾಶ ನೀಡಿದ್ದೀರಿ. ಇದು ನನ್ನ ಜೀವನದ ದೊಡ್ಡ ಆಸ್ತಿ ಎಂದು ಜನತೆಗೆ ಕೃತಜ್ಞತೆ ಸಲ್ಲಿಸಿದ್ದಾರೆ.