ಬೀದರ್: ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ರಾಜ್ಯಕ್ಕೆ ಕಾಲಿಡಲಿ ನೋಡೋಣ ಎಂದು ಹೇಳುವ ಮೂಲಕ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಬೀದರ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಮಹಾರಾಷ್ಟ್ರದ ಮಾದರಿ ರಾಜ್ಯದಲ್ಲೂ ನಾಥ ಆಪರೇಷನ್ ಸಿಎಂ ಶಿಂಧೆ ಹೇಳಿಕೆಗೆ ಪ್ರತಿಕ್ರಿಯಿಸಿದರು.
ಸಂವಿಧಾನಿಕ ಸಿಎಂ ಸ್ಥಾನದಲ್ಲಿದ್ದುಕೊಂಡು ಈ ರೀತಿ ಹೇಳೋಕೆ ಶಿಂಧೆಗೆ ನಾಚಿಕೆಯಾಗಬೇಕು. ಬರೀ ರಾಜ್ಯದಲ್ಲಿ ಕಳವು ಮಾಡಬೇಕು ಅನ್ನೋದೇ ಅವರ ಉದ್ದೇಶ ಎಂದು ತೀರುಗೇಟು ನೀಡಿದರು.
ಆಪರೇಷನ್ ಕಮಲ ಮಾಡೋಣ ಅನ್ನೋದು ಒಂದು ಹಣ, ಆಸ್ತಿ ಕಸಿದುಕೊಳ್ಳುವ ಕೆಲಸ ಮಾಡೋಕೆ, ಇಂಥೋರಿಗೆ ಛೀಮಾರಿ ಹಾಕೋಣ. ಇಲ್ಲೇನು ಕಾಂಗ್ರೆಸ್ ನವರು ಗಿರಾಕಿಗಳು ಇದ್ದಾರಾ ಹೊತ್ತುಕೊಂಡು ಹೋಗೋಕೆ. ಅವರಿಗೆ ಇಲ್ಲಿ ಸುಮ್ಮನೆ ಬಿಡುತ್ತಾರಾ ಎಂದು ಶಿಂಧೆಗೆ ಖಂಡ್ರೆ ಟಾಂಗ್ ನೀಡಿದರು.