ಬೆಂಗಳೂರು:- ಕಳ್ಳರು ಖರೀದಿ ನೆಪದಲ್ಲಿ ಶಾಪ್ಗೆ ಬಂದು 15 ಕೆ.ಜಿ ತುಪ್ಪ ಕದ್ದಿರುವ ಘಟನೆ ನಗರದ ಕೊಮ್ಮಘಟ್ಟ ರಸ್ತೆಯ ಸ್ಯಾಟ್ಲೈಟ್ ಕ್ಲಬ್ ಬಳಿ ಜರುಗಿದೆ.
ರೋಗಿಗಳಿಗೆ ಕೇಂದ್ರದಿಂದ ಸಿಕ್ತು ಗುಡ್ ನ್ಯೂಸ್… ಶುಗರ್, ಹೃದ್ರೋಗ ಸೇರಿ 41 ಔಷಧಿಗಳ ಬೆಲೆ ಕಡಿತ!
ಇಬ್ಬರು ಖದೀಮರು ಕ್ಷಣಾರ್ಧದಲ್ಲಿ ಬಂದು ತುಪ್ಪ ಕಳ್ಳತನ ಮಾಡಿದ್ದಾರೆ. ಕಳ್ಳರ ಕಳ್ಳಾಟದ ಇಂಚಿಂಚು ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ತುಪ್ಪ ಬೇಕು ಎಂದು ನಂದಿನಿ ಸ್ಟೋರಿಗೆ ಬಂದ ಕಳ್ಳರು, 15 ಕೆಜಿ ತುಪ್ಪ ಪಡೆದು ಬ್ಯಾಗ್ ನಲ್ಲಿ ಹಾಕಿಕೊಂಡಿದ್ದಾರೆ. ಬಳಿಕ ಪೇಡಾ ಬೇಕು ಆರು ಬಾಕ್ಸ್ ಕೊಡಿ ಎಂದಿದ್ದರು. ಅದರಂತೆ ಪೇಡ ಬಾಕ್ಸ್ ಕೊಡಲು ಡಬ್ಬದ ಕಡೆ ತಿರುಗಿದ್ದ ಸಿಬ್ಬಂದಿ, ಈ ವೇಳೆ 15 ಕೆಜಿ ತುಪ್ಪ ಇದ್ದ ಬ್ಯಾಗ್ ಸಮೇತ ಕಳ್ಳರು ಎಸ್ಕೇಪ್ ಆಗಿದ್ದಾರೆ. ಕೂಡಲೇ ಅಂಗಡಿ ಸಿಬ್ಬಂದಿಗಳು ಕಳ್ಳರ ಬೆನ್ನು ಬಿದ್ದಿದ್ದಾರೆ. ಜೊತೆಗೆ ಮೂರು ಕಿ.ಮೀ ಫಾಲೋ ಕೂಡ ಮಾಡಿದರೂ ಕಣ್ತಪ್ಪಿಸಿ ಎಸ್ಕೇಪ್ ಆಗಿದ್ದಾರೆ.