ತಿರುವನಂತಪುರಂ:- 4 ವರ್ಷದ ಬಾಲಕಿಗೆ ಕೈ ಬೆರಳಿನ ಬದಲು ನಾಲಿಗೆಗೆ ಶಸ್ತ್ರಚಿಕಿತ್ಸೆ ಮಾಡಿ ವೈದ್ಯರ ತಂಡ ನಿರ್ಲಕ್ಷ್ಯ ತೋರಿರುವುದು ಬೆಳಕಿಗೆ ಬಂದಿದೆ.
ಉರಿ ಬಿಸಿಲಲ್ಲೂ ನಿಮ್ಮ ತ್ವಚೆ ಪಳಪಳ ಎಂದು ಹೊಳೆಯಬೇಕೆ!?.. ಹಾಗಿದ್ರೆ ಮಾವಿನಹಣ್ಣು ಹೀಗೆ ಬಳಸಿ!
ಬಾಲಕಿ ಕೈಯಲ್ಲಿ ಆರು ಬೆರಳುಗಳು ಇದ್ದ ಕಾರಣ ಆಕೆಯನ್ನು ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿನ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ತಪಾಸಣೆ ನಡೆಸಿದ ವೈದ್ಯರು 6ನೇ ಬೆರಳನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆಯಬಹುದು ಎಂದು ಹೇಳಿದ್ದಾರೆ. ಇದಕ್ಕೆ ಒಪ್ಪಿಕೊಂಡ ಬಾಲಕಿ ಪೋಷಕರು, ಶಸ್ತ್ರಚಿಕಿತ್ಸೆಗೆ ಕಳುಹಿಸಿದ್ದಾರೆ
ಸ್ವಲ್ಪ ಸಮಯದ ನಂತರ ವಾಪಸ್ಸಾದ ಬಾಲಕಿಯನ್ನು ಕಂಡು ಪೋಷಕರು ಕಂಗಾಲಾಗಿದ್ದಾರೆ. ಬಾಯಿಗೆ ಪ್ಲಾಸ್ಟರ್ ಹಾಕಿದ್ದ ಕಾರಣ ಏನಾಯಿತು ಎಂಬ ಗೊಂದಲದಲ್ಲಿ ಪೋಷಕರು ಮಗುವಿನ ಕೈಯನ್ನು ಗಮನಿಸಿದ್ದಾರೆ. ಆಗ ಬಾಲಕಿ ಕೈಯಲ್ಲಿದ್ದ 6ನೇ ಬೆರಳು ಹಾಗೇ ಇತ್ತು” ಎಂದು ಸಂಬಂಧಿಕರು ಹೇಳಿದ್ದಾರೆ.
ಪೋಷಕರು ಕೂಡಲೇ ಅಲ್ಲಿದ್ದ ನರ್ಸ್ ಅನ್ನು ಕೇಳಿದ್ದಾರೆ. ಆದರೆ ನರ್ಸ್ ನಗುತ್ತಾ, ನಾಲಿಗೆಯ ಸಮಸ್ಯೆ ಇದೆ ಎಂದು ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದು ಹೇಳಿದ್ದಾರೆ. ಆಕೆ ಹೇಳಿದ ಕೆಲವೇ ಕ್ಷಣಗಳಲ್ಲಿ ವೈದ್ಯರು ಪೋಷಕರ ಬಳಿ ಬಂದು ಕ್ಷಮೆಯಾಚಿಸಿದ್ದಾರೆ. ಹಾಗೇ ಬಾಲಕಿಯ 6ನೇ ಬೆರಳನ್ನು ತೆಗೆಯುವುದಾಗಿ ತಿಳಿಸಿ ಮತ್ತೆ ಕರೆದುಕೊಂಡು ಹೋಗಿದ್ದಾರೆ ಎಂದು ಆಸ್ಪತ್ರೆಯಲ್ಲಿ ನಡೆದ ವಿಷಯವನ್ನು ಸಂಬಂಧಿಕರು ವಿವರಿಸಿದ್ದಾರೆ.
ಚೆರುವನ್ನೂರಿನವರಾದ ಪೋಷಕರು ತಮ್ಮ 4 ವರ್ಷದ ಮಗಳ ಕೈಯಲ್ಲಿ 6 ಬೆರಳು ಇದ್ದ ಕಾರಣ ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿನ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ವೈದ್ಯರು ಅದನ್ನು ಪರಿಶೀಲಿಸಿ ಶಸ್ತ್ರಚಿಕಿತ್ಸೆ ಮೂಲಕ 6ನೇ ಬೆರಳನ್ನು ತೆಗೆಯಬಹುದು ಎಂದು ಹೇಳಿದ್ದಾರೆ. ಇದಕ್ಕೆ ಸರಿ ಎಂದಿರುವ ಪೋಷಕರು ಮಗಳನ್ನು ಶಸ್ತ್ರಚಿಕಿತ್ಸೆಗೆಂದು ವೈದ್ಯ ಸಿಬ್ಬಂದಿ ಜೊತೆ ಕಳುಹಿಸಿದ್ದಾರೆ. ಬೆಳಗ್ಗೆ 9 ಗಂಟೆ ಸಮಯದಲ್ಲಿ ಬಾಲಕಿಯನ್ನು ಆಪರೇಷನ್ ಥಿಯೇಟರ್ ಗೆ ಕರೆದುಕೊಂಡು ಹೋಗಿದ್ದಾರೆ.
ಆಪರೇಷನ್ ಥಿಯೇಟರ್ ನಲ್ಲಿ ಕೈ ಬೆರಳ ಬದಲು ಬಾಲಕಿಯ ನಾಲಿಗೆಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಶಸ್ತ್ರಚಿಕಿತ್ಸೆ ನಂತರ ಬಾಲಕಿಯನ್ನು ಕೋಣೆಗೆ ಶಿಫ್ಟ್ ಮಾಡಿದ್ದಾರೆ. ಆಗ ಮಗಳ ಬಾಯಲ್ಲಿದ್ದ ಹತ್ತಿ, ಪ್ಲಾಸ್ಟರ್ ಕಂಡ ಪೋಷಕರು ಕಂಗಾಲಾಗಿ ಪ್ರಶ್ನಿಸಿದ್ದಾರೆ. ನಾಲಿಗೆಯಲ್ಲಿ ರಂಧ್ರವಿದ್ದ ಕಾರಣ ಆಪರೇಷನ್ ಮಾಡಲಾಗಿದೆ ಎಂದು ಅಲ್ಲಿದ್ದ ಆಸ್ಪತ್ರೆ ಸಿಬ್ಬಂದಿ ಹೇಳಿದ್ದಾರೆ. ಆಗ ಪೋಷಕರು ನಾಲಿಗೆ ಸಮಸ್ಯೆಯಲ್ಲ, ಕೈ ಬೆರಳ ಸಮಸ್ಯೆ ಎಂದು ಹೇಳಿದ್ದಾರೆ.
![](https://ainlivenews.com/wp-content/uploads/2024/01/Ad-Banner-copy-scaled.jpg)