ಕೋಲ್ಕತ್ತಾ : ಕೂಸು ಹುಟ್ಟವ ಮುನ್ನವೇ ಕುಲಾವಿ ಎನ್ನುವ ಗಾದೆ ಮಾತಿನಂತೆ, ಇಂಡಿಯಾ ಮೈತ್ರಿಕೂಟ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ, ಷರತ್ತಿನ ಬಾಹ್ಯ ಬೆಂಬಲ ನೀಡುವುದಾಗಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ರಾಜ್ಯದಲ್ಲಿ ತಮಗೆ ವಿರೋಧಿಗಳಾಗಿರುವ ಪಕ್ಷಗಳ ಜೊತೆ ಯಾವುದೇ ಹೊಂದಾಣಿಕೆಯಿಲ್ಲ ಎಂದಿರುವ ಮಮತಾ, ಪಶ್ಚಿಮ ಬಂಗಾಳದ ಕಾಂಗ್ರೆಸ್ ಮತ್ತು ಎಡಪಕ್ಷಗಳು ಸರ್ಕಾರದ ಭಾಗವಾಗಿರಬಾರದು ಎಂದು ಕಂಡೀಷನ್ ಹಾಕಿದ್ದಾರೆ.
ಇಂಡಿಯಾ ಮೈತ್ರಿಕೂಟ ಎನ್ನುವುದು ಅಸ್ತಿತ್ವಕ್ಕೆ ಬಂದಾಗಿನಿಂದಲೂ ಗೊಂದಲದ ಗೂಡಾಗಿ ಕೂತಿದೆ. ಆಮ್ ಆದ್ಮಿ ಪಕ್ಷವು ರಾಷ್ಟ್ರ ಮಟ್ಟದಲ್ಲಿ ಮೈತ್ರಿಕೂಟದ ಭಾಗವಾಗಿದ್ದರೂ ಪಂಜಾಬ್ ನಲ್ಲಿ ಮಾತ್ರ ಪ್ರತ್ಯೇಕವಾಗಿ ಸ್ಪರ್ಧಿಸುತ್ತಿದೆ.ಇನ್ನು, ಎಡಪಕ್ಷಗಳ ಕಥೆಯೂ ಹಾಗೆಯೇ.. ಕೇರಳದಲ್ಲಿ ಸಿಪಿಐ, ಸಿಪಿಐ (ಎಂ) ಸೇರಿದಂತೆ ಎಡಪಕ್ಷಗಳು ಪ್ರತ್ಯೇಕವಾಗಿ ಸ್ಪರ್ಧಿಸುತ್ತಿದೆ.
![Demo](https://ainlivenews.com/wp-content/uploads/2023/12/spoorthi-1.jpg)
BMTC Recruitment: ದ್ವಿತೀಯ PUC ಪಾಸಾದವರಿಗೆ BMTCಯಲ್ಲಿ ಬಂಪರ್ ಉದ್ಯೋಗ..! ಈಗಲೇ ಅರ್ಜಿ ಸಲ್ಲಿಸಿ
ಕಾಂಗ್ರೆಸ್ ವಿರುದ್ದ ಹರಿಹಾಯುತ್ತಿರುವ ಎಡಪಕ್ಷಗಳು, ವಯನಾಡ್ ನಲ್ಲಿ ತಮ್ಮ ಅಭ್ಯರ್ಥಿಯಾಗಿ ಹಿರಿಯ ಮುಖಂಡ ಎ.ರಾಜಾ ಅವರ ಪತ್ನಿ ಅನ್ನೀರಾಜ ಅವರನ್ನು ಕಣಕ್ಕಿಳಿಸಿದೆ. ಅಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಹುಲ್ ಗಾಂಧಿಯಾಗಿದ್ದಾರೆ. ” ನಾವು ಬಿಜೆಪಿಯನ್ನು ಅಧಿಕಾರದಿಂದ ದೂರವಿರಿಸಲು ಎಲ್ಲಾ ತ್ಯಾಗಕ್ಕೂ ಸಿದ್ದವಿದೆ, ನಾವು ಇಂಡಿಯಾ ಮೈತ್ರಿಕೂಟಕ್ಕೆ ಬಾಹ್ಯ ಬೆಂಬಲವನ್ನು ನೀಡುತ್ತೇವೆ. ಆದರೆ, ಒಕ್ಕೂಟದ ಭಾಗವಾಗಿ ಬೆಂಗಾಳ ಕಾಂಗ್ರೆಸ್, ಸಿಪಿಐ (ಎಂ) ಅನ್ನು ಪರಿಗಣಿಸಬಾರದು ” ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
![](https://ainlivenews.com/wp-content/uploads/2024/01/Ad-Banner-copy-scaled.jpg)