ಬೆಂಗಳೂರು : ಬಿಎಂಟಿಸಿಯ ಎಲೆಕ್ಟ್ರಿಕ್ ಬಸ್ಸುಗಳ ಸೇವೆ ನೀಡುವ ಸಿಬ್ಬಂದಿಗಳ ಮುಷ್ಕರದ ಬಗ್ಗೆ ಕರ್ನಾಟಕ ಬಿಜೆಪಿ ಐಟಿ ವಿಭಾಗ ಟ್ವೀಟ್ ಒಂದನ್ನು ಮಾಡಿದೆ. ಸಿಬ್ಬಂದಿಗಳಿಗೆ ವೇತನ ನೀಡಲು ಯೋಗ್ಯತೆ ಇಲ್ಲದ ಸರ್ಕಾರ ಎಂದು ಕಿಡಿಕಾರಿ ಟ್ವೀಟ್ ( ಎಕ್ಸ್ ) ಮಾಡಿದೆ. ’ ಸಿಬ್ಬಂದಿಗಳಿಗೆ ಸಂಬಳ ಕೊಡಲು ಯೋಗ್ಯತೆ ಇಲ್ಲದ ಏಕೈಕ ಸರ್ಕಾರವೆಂದರೆ ಅದು @INCKarnataka ಸರ್ಕಾರ.
ಹೆಂಡತಿಯ ಪ್ರಜ್ಞೆ ತಪ್ಪಿಸಿ ಪರಪುರಷರಿಂದ ಅತ್ಯಾಚಾರ ಮಾಡಿಸ್ತಿದ್ದ ಪತಿ.! ಪಾಪಿ ಸಿಕ್ಕಿ ಬಿದ್ದಿದ್ದು ಹೇಗೆ ಗೊತ್ತಾ..?
ತಮ್ಮ ಸಂಬಳವನ್ನು ಸರಿಯಾಗಿ ನಮಗೆ ನೀಡಿ ಎಂದು ಸಾರಿಗೆ ಸಂಸ್ಥೆಗಳ ನೌಕರರು ಬೀದಿಗಿಳಿದಿರುವುದು ರಾಜ್ಯದ ಇತಿಹಾಸದಲ್ಲಿ ಇದೇ ಮೊದಲು ’ ಎಂದು ಕರ್ನಾಟಕ ಬಿಜೆಪಿ ಐಟಿ ಘಟಕ ಟ್ವೀಟ್ ಮಾಡಿದೆ. ಮುಂದುವರಿಯುತ್ತಾ, ’ ಸಿಎಂ @siddaramaiah ಅವರೇ, ರಾಜ್ಯ ಸರ್ಕಾರ ದಿವಾಳಿಯಾಗಿಲ್ಲ ಎಂದು ಮೇಜು ಕುಟ್ಟುವ ನಿಮ್ಮ ಪೌರುಷವನ್ನು ಸಿಬ್ಬಂದಿಗೆ ಸರಿಯಾಗಿ ಸಂಬಳ ನೀಡುವಲ್ಲಿ ತೋರಿಸಿ, ರಾಜ್ಯ ಸರ್ಕಾರ ದಿವಾಳಿಯಾಗಿಲ್ಲ ಎಂಬುದನ್ನು ನಿರೂಪಿಸಿ ’ ಎಂದು ಚಾಲೆಂಜ್ ಮಾಡಿದೆ.