ಶಿಡ್ಲಘಟ್ಟ: ಆಹಾರ ಅರಸಿ ಗ್ರಾಮ ದತ್ತ ಬಂದಿದ್ದ ಜಿಂಕೆಯನ್ನು ಬೀದಿ ನಾಯಿಗಳು ಕಚ್ಚಿ ಸಾಯಿಸಿವೆ.
ಮಹಾರಾಷ್ಟ್ರದಲ್ಲಿ ಕೋವಿಡ್ ಉಪ ತಳಿ ಹೆಚ್ಚಳ.. ಕರ್ನಾಟಕಕ್ಕೆ ಶುರುವಾಯ್ತು ಆತಂಕ…!
ತಾಲೂಕಿನ ಗಾಂಡ್ಲಚಿಂತೆ ಗ್ರಾಮದಲ್ಲಿ ಘಟನೆ ನಡೆದಿದ್ದು, ತಾಲ್ಲೂಕು ವಲಯ ಅರಣ್ಯಾಧಿಕಾರಿ ಸುಧಾಕರ್ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿದ್ದಾರೆ. ಗುಂಪಾಗಿ ದಾಳಿ ನಡೆಸಿರುವ ಬೀದಿ ನಾಯಿಗಳ ದಾಳಿಗೆ ತುತ್ತಾಗಿರುವ ಜಿಂಕೆ ರಕ್ತ ಸ್ರಾವದಲ್ಲಿ ನರಳುತ್ತಿರುವುದನ್ನು ಕಂಡು ಗ್ರಾಮಸ್ಥರು ಬೀದಿ ನಾಯಿಗಳನ್ನು ಚದುರಿಸಿದ್ದಾರೆ. ಚಿಕಿತ್ಸೆಗಾಗಿ ದಿಬ್ಬೂರಹಳ್ಳಿಯ ಪಶು ಚಿಕಿತ್ಸಾಲಯಕ್ಕೆ ರವಾನಿಸಿದರು ಫಲಕಾರಿಯಾಗದೆ ಜಿಂಕೆ ಪ್ರಾಣ ಕಳೆದುಕೊಂಡಿದೆ.
ಗಾಂಡ್ಲ ಚಿಂತೆ ಹಾಗು ಸುತ್ತ ಮುತ್ತಲ ಗ್ರಾಮಗಳ ಹೊರವಲಯದ ಬೆಟ್ಟ ಗುಡ್ಡಗಳನ್ನು ಆವಾಸಸ್ಥಾನ ಮಾಡಿಕೊಂಡಿರುವ ಜಿಂಕೆಗಳು ಆಹಾರ ನೀರು ಅರಸಿ ಆಗಾಗ್ಗೆ ಗ್ರಾಮಗಳ ಕಡೆ ಬರುವುದುಂಟು.
ಈ ಸಂದರ್ಭದಲ್ಲಿ ಉಪ ವಲಯ ಅರಣ್ಯಾಧಿಕಾರಿ ಜಯಚಂದ್ರ ಸಿಬ್ಬಂದಿಗಳಾದ ಸಂದೀಪ್ ಲೋಕೇಶ್ ನರಸಿಂಹಪ್ಪ ನಾಗರಾಜು ಹಾಜರಿದ್ದರು.