ದುಡ್ಡು ಬೇಕಿದ್ರೆ ನಾವ್ ಕೊಡ್ತೀವಿ, ದಯವಿಟ್ಟು ನಮ್ಮ ಮನವಿ ಕೇಳಿ ಎಂದು RCB ಅಭಿಮಾನಿಗಳು ಮ್ಯಾನೇಜ್ಮೆಂಟ್ ಗೆ ಬೇಡಿಕೆ ಇಟ್ಟಿದ್ದಾರೆ.
Siddaramaiah: ರೈತರ ಸಾಲ ಮನ್ನಾ ಮಾಡಿ ಎನ್ನುವ ನೈತಿಕತೆ ಯಡಿಯೂರಪ್ಪಗೆ ಇಲ್ಲ – ಸಿದ್ದರಾಮಯ್ಯ
ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಕೆಎಲ್ ರಾಹುಲ್ ನಾಯಕತ್ವದ ಲಕ್ನೋ ಸೂಪರ್ಜೈಂಟ್ಸ್ 10 ವಿಕೆಟ್ಗಳ ಹೀನಾಯ ಸೋಲನ್ನು ಅನುಭವಿಸಿತು. ಇದರಿಂದಾಗಿ ತಂಡದ ನಾಯಕ ಕೆಎಲ್ ರಾಹುಲ್ ನಾಯಕತ್ವಕ್ಕೂ ಅಪಾಯ ಎದುರಾಗಿದೆ ಎಂಬ ಮಾತುಗಳು ಕೇಳಿಬರುತ್ತಲಿದೆ.
ಈ ಸೋಲಿನ ನಂತರವೂ ಸಹ ಎಲ್ಎಸ್ಜಿ ಐಪಿಎಲ್ ಪ್ಲೇಆಫ್ಗಳ ರೇಸ್ನಲ್ಲಿ ಉಳಿದಿದೆ. ಆದರೆ ಕಳೆದ ಎರಡು ಪಂದ್ಯಗಳಲ್ಲಿ ತಂಡವು ಹೀನಾಯ ಸೋಲನ್ನು ಅನುಭವಿಸಿದೆ. ಹೀಗಾಗಿ ಕೆಎಲ್ ರಾಹುಲ್ ಅವರ ನಾಯಕತ್ವ ಅನಿಶ್ಚಿತವಾಗಿದೆ. ಲೀಗ್ನ ಉಳಿದ ಎರಡು ಪಂದ್ಯಗಳಲ್ಲಿ ಅವರು ನಾಯಕತ್ವದಿಂದ ಕೆಳಗಿಳಿಯಬಹುದು. ಅವರ ಸ್ಥಾನದಲ್ಲಿ ಉಪನಾಯಕನನ್ನು ನಾಯಕನನ್ನಾಗಿ ಮಾಡಬಹುದು. ಇದಲ್ಲದೇ ಇದೀಗ ಕೆಎಲ್ ರಾಹುಲ್ ಈ ತಂಡದಲ್ಲಿ ಮುಂದುವರಿಯುವ ಬಗ್ಗೆ ಅನುಮಾನ ಮೂಡಿದೆ.
2022ರ ಹರಾಜಿನಲ್ಲಿ ದಾಖಲೆಯ 17 ಕೋಟಿ ರೂ.ಗೆ ಲಕ್ನೋ ತಂಡವನ್ನು ಸೇರಿಕೊಂಡಿದ್ದ ಕೆಎಲ್ ರಾಹುಲ್ ಅವರನ್ನು 2025ರ ದೊಡ್ಡ ಹರಾಜಿಗೂ ಮುನ್ನ ತಂಡ ಉಳಿಸಿಕೊಳ್ಳುವ ಸಾಧ್ಯತೆ ತೀರಾ ಕಡಿಮೆ ಎಂಬ ಮಾತುಗಳು ಕೇಳಿಬರುತ್ತಿದೆ. ಆದರೆ, ಇದೇ ವೇಳೆ ರಾಹುಲ್ ಸ್ವತಃ ನಾಯಕನ ಸ್ಥಾನವನ್ನು ತೊರೆದು ಮುಂದಿನ ಎರಡು ಪಂದ್ಯಗಳಲ್ಲಿ ತಮ್ಮ ಬ್ಯಾಟಿಂಗ್ನತ್ತ ಗಮನ ಹರಿಸಬಹುದು ಎಂಬ ಊಹಾಪೋಹವಿದೆ. ಇನ್ನೂ ಕೆಎಲ್ ರಾಹುಲ್ರನ್ನ ಲಕ್ನೋ ಮಾಲೀಕರು ನಿಂದಿಸಿದ್ದರು. ಇದನ್ನು ನೋಡಿದ ಕನ್ನಡಿಗರು ರೊಚ್ಚಿಗೆದ್ದಿದ್ದಾರೆ. ದಯವಿಟ್ಟು ಆರ್ಸಿಬಿಗೆ ಅವರನ್ನು ವಾಪಾಸ್ ಕರೆಸಿ ಅಂತ ಡಿಮ್ಯಾಂಡ್ ಮಾಡುತ್ತಿದ್ದಾರೆ. ದುಡ್ಡ ಬೇಕಾದ್ರೆ ನಾವೇ ಕೊಡ್ತೀವಿ. ಮುಂದಿನ ಸಲ ಆರ್ಸಿಬಿಗೆ ರಾಹುಲ್ರನ್ನ ವಾಪಸ್ ಕರೆಸಿ ಪ್ಲೀಸ್ ಅಂತ ಆರ್ಸಿಬಿ ಮ್ಯಾನೇಜ್ಮೆಂಟ್ಗೆ ಫ್ಯಾನ್ಸ್ ಮನವಿ ಮಾಡಿಕೊಳ್ಳುತ್ತಿದ್ದಾರೆ. ರಾಹುಲ್ರನ್ನ ಈ ಥರ ನೋಡೋದಕ್ಕೆ ಆಗಲ್ಲ ಅಂತಿದ್ದಾರೆ.