ಬೆಂಗಳೂರು :- ನನ್ನ ಹತ್ತಿರ ಇರುವ ಪೆನ್ ಡ್ರೈವ್ ಶೀಘ್ರದಲ್ಲೇ ಬಿಡ್ತೀನಿ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
Breaking: ಕೇಜ್ರಿವಾಲ್ಗೆ ಸುಪ್ರೀಂ ನಿಂದ ಜಾಮೀನು ನೀಡಲು ಇಡಿ ವಿರೋಧ..!
ಈ ಸಂಬಂಧ ಮಾತನಾಡಿದ ಅವರು,ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಸಂಬಂಧಿಸಿದ ಪೆನ್ ಡ್ರೈವ್ ತನ್ನ ಬಳಿ ಇದೆ ಎಂದು ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದ ಎಚ್ಡಿಕೆ, ಇದೀಗ ಪೆನ್ ಡ್ರೈವ್ ಬಗ್ಗೆ ಪುನರುಚ್ಚರಿಸಿದ್ದಾರೆ. ನನ್ನ ಹತ್ತಿರ ಇರೋ ಪೆನ್ ಡ್ರೈವ್ ಅನ್ನು ಬಿಡ್ತೀನಿ ಎಂದಿದ್ದಾರೆ. ನಾನು ಅವತ್ತೇ ಹೇಳಿದ್ದೆ ಆ ಪೆನ್ ಡ್ರೈವ್ ಹೊರಗೆ ತಂದರೆ ಅದರಲ್ಲಿರುವರ ವಿರುದ್ಧ ಸ್ಪೀಕರ್ ಕ್ರಮ ಕೈಗೊಳ್ಳುವ ಯೋಗ್ಯತೆ ಇಲ್ಲ ಅಂತ ಕಿಡಿಕಾರಿದ್ದಾರೆ. ಅಲ್ಲದೇ ವರ್ಗಾವಣೆ ದಂಧೆ, ಸರ್ಕಾರದಲ್ಲಿನ ಲೂಟಿ ಅಂತಹವುಗಳು ನನ್ನ ಪೆನ್ ಡ್ರೈವ್ನಲ್ಲಿ ಇರೋದು ಅಂತ ಹೇಳಿದ್ದಾರೆ
ಯಾವನೋ ಇದ್ದಾನಲ್ಲ ಕಾರ್ತಿಕ್, ಅವನು ಯಾರ ಜೊತೆ ಇದ್ದಾನೇ..? ನಿನ್ನೇ ತಾನೇ ಫೋಟೋ ಬಂದಿದೆಯಲ್ಲ..? ಯಾವನೋ ಮತ್ತೊಬ್ಬ ಪುಟ್ಟರಾಜು ಇದ್ದಾನಲ್ಲ, ಅವನು ಯಾಕೇ ಶ್ರೇಯಸ್ ಪಟೇಲ್ ಭೇಟಿ ಮಾಡಿದ್ದ..? ನೀವು ಯಾರನ್ನು ಹಿಡಿಯಬೇಕಿಲ್ಲ, ಈ ರಾಜ್ಯದ ಹೆಣ್ಣು ಮಕ್ಕಳಿಗೆ ಮಾನ ಹರಣ ಶೀಲ ಹರಣ ಅಂತೀರಲ್ಲ ಕೃಷ್ಣ ಭೈರೇಗೌಡ್ರೇ , ಅಬ್ಬಬ್ಬಾ ಅಂತ ಎಚ್ಡಿಕೆ ಕಿಡಿಕಾರಿದ್ದಾರೆ.
21ನೇ ತಾರೀಖು ಪೆನ್ ಡ್ರೈವ್ಗೆ ಎಷ್ಟೋ ಹಣ ಖರ್ಚು ಮಾಡಿದ್ದೀರಲ್ಲ ನಾನು ಇಂತಹ ಪೆನ್ ಡ್ರೈವ್ ತಯಾರು ಮಾಡಿದ್ದವನಲ್ಲ ಎಂದಿದ್ದಾರೆ. ಅಣ್ಣ ತಮ್ಮಂದಿರು ಚಿಲ್ಲರೆ ಕೆಲಸ ಮಾಡಲ್ಲ ಅಂತೀರಲ್ಲ, ನೀವು ಚಿಲ್ಲರೇ ಕೆಲಸ ಮಾಡ್ತೀರಾ ಅಂತಾ ಹೇಳ್ಬೇಕಾ? ನೀವು ಪಾಪ ಎಲ್ಲವೂ ದೊಡ್ಡದ್ದೇ ಅಲ್ವಾ ಮಾಡೋದು? ಬ್ಲಾಕ್ ಅಂಡ್ ಟಿವಿಯನ್ನು ದೊಡ್ಡ ಆಲಹಳ್ಳಿಯಲ್ಲಿ ಏನೋ ಜನರಿಗೆ ತೋರಿಸ್ತಿದ್ರಲ್ಲ, ನನ್ನ ಕಥಾ ನಾಯಕ ಅಂತಾ ಹೇಳಿದ್ಮೇಲೆ, ನೀವು ಖಳನಾಯಕ ಆಗಬೇಕು ಅಲ್ವಾ.? ಅಂತ ಡಿಕೆಶಿ ವಿರುದ್ಧ ಕುಮಾರಸ್ವಾಮಿ ಕಿಡಿಕಾರಿದ್ರು.
ಆ ಹೆಣ್ಣು ಮಗಳನ್ನು ಎಲ್ಲಿಂದ ಕರೆದುಕೊಂಡು ಬಂದಿದ್ದೀರಾ? ಆ ಹೆಣ್ಣು ಮಗಳಿಂದ ಇನ್ನೂ 164 ಹೇಳಿಕೆ ಯಾಕೆ ತಗೊಂಡಿಲ್ಲ? ಕೃಷ್ಣ ಭೈರೇಗೌಡ್ರೇ ನಾನು ನಿಮ್ಮಿಂದ ಪಾಠ ಕಲಿಬೇಕಾ? ಕೃಷ್ಣ ಭೈರೇಗೌಡ್ರೇ ನನಗಿಂತ ಹೆಚ್ಚಾಗಿ ನೀವು ತಿಳಿದುಕೊಂಡವರು ಅಲ್ವಾ? ನಿಮಗೆ ಜ್ಞಾನ ಇಲ್ವಾ? ಅಂತ ಎಚ್ಡಿಕೆ ಪ್ರಶ್ನಿಸಿದ್ರು.