ಬೆಂಗಳೂರು:– ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಕೇಸ್ ಗೆ ಸಂಬಧಪಟ್ಟಂತೆ ಇದು ಪ್ರಪಂಚದ ಅತೀ ದೊಡ್ಡ ಲೈಂಗಿಕ ಹಗರಣ ಎಂದು ಕೃಷ್ಣ ಬೈರೇಗೌಡ ಹೇಳಿದ್ದಾರೆ.
Karnataka SSLC 2024 Toppers: ಬಾಗಲಕೋಟೆ ಅಂಕಿತಾ 625ಕ್ಕೆ 625 ಅಂಕ ಪಡೆದ ಏಕೈಕ ವಿದ್ಯಾರ್ಥಿನಿ..!
ಈ ಸಂಬಂಧ ಮಾತನಾಡಿದ ಅವರು, ಇದು ವಿಶ್ವದ ಅತಿದೊಡ್ಡ ಲೈಂಗಿಕ ದೌರ್ಜನ್ಯ ಪ್ರಕರಣ, ಅದರಲ್ಲಿ ಎರಡು ಮಾತಿಲ್ಲ, ಒಬ್ಬ ನಿವೃತ್ತ ಐಎಎಸ್ ಅಧಿಕಾರಿ ಇಂದು ಬೆಳಗ್ಗೆ ತನಗೆ ಫೋನ್ ಮಾಡಿ ವಿಡಿಯೋ ನೋಡಿದ ಬಳಿಕ ತನಗೆ ವಿಪರೀತ ಮಾನಸಿಕ ಹಿಂಸೆಯಾಗುತ್ತಿದೆ ಅಂತ ಕಣ್ಣೀರು ಸುರಿಸಿದ್ದಾರೆ ಎಂದು ಹೇಳಿದರು.
ಇಡೀ ನಾಗರಿಕ ಸಮಾಜ ತಲೆತಗ್ಗಿಸುವ ಪ್ರಕರಣ ಇದು, ಇದರಲ್ಲಿ ಅನ್ಯಾಯವಾದವರಿಗೆ ಶಿಕ್ಷೆಯಾಗಲೇ ಬೇಕು ಮತ್ತು ತಪ್ಪಿತಸ್ಥರು ಯಾರೇ ಅಗಿರಲಿ, ಅದು ನಾನೇ ಆಗಿರಬಹುದು, ನನ್ನ ಸರ್ಕಾರ ಆಗಿರಬಹುದು ಅಥವಾ ಬೇರೆ ಯಾರೇ ಆಗಿರಬಹುದು, ಅವರಿಗೆ ಶಿಕ್ಷೆಯಾಗಲೇಬೇಕು, ಯಾವ ಕಾರಣಕ್ಕೂ ವಿಷಯಾಂತರ ಅಗಬಾರದು, ನನ್ನ ಗುರಿ ಮತ್ತು ಉದ್ದೇಶ ಇಷ್ಟೇ ಆಗಿದೆ ಎಂದು
ಹೇಳಿದ್ದಾರೆ.