ಮಂಡ್ಯ: ಪೆನ್ಡ್ರೈವ್ ಕೇಸಲ್ಲಿ ಡಿಕೆಶಿ ಕೈವಾಡ ಇರೋದು 100ರಷ್ಟು ಸತ್ಯ. ಶಿವರಾಮೇಗೌಡರಿಗೆ ಕೈ ಪ್ರಭಾವಿ ನಾಯಕ 5 ಕೋಟಿ ಕೊಟ್ಟಿದ್ದಾರೆ ಎಂದು ಮಾಜಿ ಶಾಸಕ ಸುರೇಶ್ ಗೌಡ ಹೊಸ ಬಾಂಬ್ ಸಿಡಿಸಿದ್ದಾರೆ. ನಾಗಮಂಗಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದುಡ್ಡಿಗಾಗಿ, ಸ್ವಾರ್ಥಕ್ಕಾಗಿ ಏನನ್ನಾದರೂ ಮಾಡುವಂತ ವ್ಯಕ್ತಿ ಶಿವರಾಮೇಗೌಡ . ಆತನ ಹೆಸರು ಹೇಳಿದರೆ ನಮ್ಮ ನಾಲಿಗೆಗೆ ಹುಳ ಬೀಳುತ್ತದೆ. ಅಂತಹ ಕೆಟ್ಟ ವ್ಯಕ್ತಿ ಮನುಷ್ಯನಾಗಿ ಹುಟ್ಟಲೇಬಾರದಿತ್ತು.
ಕಳೆದ ಚುನಾವಣೆಯಲ್ಲಿ ನನ್ನನ್ನು ಸೋಲಿಸಲು ಪ್ಲಾನ್ ಮಾಡಿದ್ರು. ಈಗ ಡಿಕೆ ಶಿವಕುಮಾರ್ ಮುಗಿಸಲು ಕ್ರಾಂಟ್ರಾಕ್ಟ್ ಪಡೆದಿರುವ ಬಗ್ಗೆ ಅನುಮಾನ ಇದೆ. ಪ್ರಜ್ವಲ್ ಪೆನ್ ಡ್ರೈವ್ ವಿಚಾರದಲ್ಲಿ ಡಿಕೆಶಿ ಕೈವಾಡ ನೂರಕ್ಕೆ ನೂರರಷ್ಟು ಸತ್ಯ. ಅದನ್ನು ಉಪಯೋಗಿಸಿಕೊಂಡು ಅವರನ್ನ ಮುಗಿಸಲು ಪ್ಲಾನ್ ನಡೆದಿದೆ ಎಂದು ಕಿಡಿಕಾರಿದರು.
https://ainlivenews.com/lakhs-of-income-can-be-earned-from-pota-fruit-cultivation/
ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವಕ್ಕಾಗಿ ಕಿತ್ತಾಟ. ಡಿಕೆಶಿ ಜೈಲಿಗೆ ಹೋದರೆ ನಾನು ನಾಯಕ ಆಗಬಹುದು ಎಂಬ ಆಲೋಚನೆ ಹಲವರಲ್ಲಿದೆ. ಹಾಗಾಗಿ ಈ ಕೆಲಸಕ್ಕೆ ಶಿವರಾಮೇಗೌಡ ಒಬ್ಬ ಏಜೆಂಟ್. ಒಬ್ಬರನ್ನು ತುಳಿಯಲು ಮತ್ತೊಬ್ಬರಿಗೆ ಕಾಂಟ್ರಾಕ್ಟ್. ಕಾಂಗ್ರೆಸ್ ಪ್ರಭಾವಿ ನಾಯಕ ಶಿವರಾಮೇಗೌಡರಿಗೆ 5 ಕೋಟಿ ಕೊಟ್ಟಿದ್ದಾರೆ. ಎಚ್ಡಿಕೆ ನಾಮಪತ್ರ ಸಲ್ಲಿಸುವ 15 ದಿನ ಮುಂಚೆ ಹಣ ವರ್ಗಾವಣೆ ಆಗಿದೆ. ಆ ವಿಚಾರ ಕೇಳಿದಾಗ ಅನುಮಾನ ಮೂಡಿತ್ತು. ಈ ವ್ಯಕ್ತಿ ಅಷ್ಟು ಬೆಲೆ ಬಾಳುವುದಿಲ್ಲ ಮತ್ಯಾಕೆ ಹಣ ಕೊಟ್ಟಿದ್ದಾರೆ ಎಂದು ಸಂಶಯ. ಈಗ ಸಂಶಯ ನಿಜವಾಗಿದೆ ಎಂದರು.