ಬೆಂಗಳೂರು: ಪ್ರಜ್ವಲ್ ಪ್ರಕರಣದಲ್ಲಿ ಸರ್ಕಾರ ಪದೇ ಪದೆ ಮೂಗು ತೂರಿಸುವುದನ್ನು ಮಾಡಬಾರದು ಎಂದು ತುಮಕೂರು ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಹೇಳಿದ್ದಾರೆ. ವಿಜಯನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜ್ವಲ್ ಪ್ರಕರಣ ಎಸ್ಐಟಿಗೆ ಕೊಟ್ಟಿದ್ದಾರೆ, ತನಿಖೆ ಮಾಡಲಿದೆ. ಪ್ರಕರಣದಲ್ಲಿ ಸರ್ಕಾರ ಪದೇ ಪದೆ ಮೂಗು ತೂರಿಸುವುದನ್ನು ಮಾಡಬಾರದು. ಡಿ.ಕೆ ಶಿವಕುಮಾರ್ ಪೆನ್ಡ್ರೈವ್ ಹಂಚಿಕೆ ಹಿಂದೆ ಇದ್ದಾರೆ ಎಂಬ ಆರೋಪದ ಬಗ್ಗೆ ಮಾಧ್ಯಮಗಳಲ್ಲಿ ನೋಡಿದೆ,
ರೈತರೇ ಗಮನಿಸಿ.. ಸಪೋಟ ಹಣ್ಣಿನ ಕೃಷಿಯಿಂದ ಗಳಿಸಬಹುದು ಲಕ್ಷಗಟ್ಟಲೇ ಆದಾಯ..!
ಇದು ಎಷ್ಟು ಸರಿ – ಎಷ್ಟು ತಪ್ಪು ಗೊತ್ತಿಲ್ಲ ಎಸ್ಐಟಿ ತನಿಖೆ ನಡೆಸಿ ಸತ್ಯ ಹೊರಗೆ ತರಲಿ, ಪ್ರಕರಣ ಸಿಬಿಐಗೆ ಕೊಡಲಿ, ಅದರಲ್ಲಿ ತಪ್ಪೇನಿಲ್ಲ ಎಂದರು. ಪ್ರಜ್ವಲ್ ಪ್ರಕರಣದಿಂದ ನಮ್ಮ ಚುನಾವಣೆ ಮತ್ತು ರಾಷ್ಟ್ರದ ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಈ ಪ್ರಕರಣ ಮೋದಿ ಅವರ ವರ್ಚಸ್ಸಿಗೆ ಒಂದು ಪರ್ಸೆಂಟ್ ಸಹ ಕುಂದುಂಟು ಮಾಡಿಲ್ಲ. ಆದರೆ, ಇಂತಹ ಹೇಯ ಕೃತ್ಯ ಯಾರೇ ಮಾಡಿದ್ದರೂ ಅಸಹ್ಯ. ಲೋಕಸಭೆ ಸದಸ್ಯನಾಗಿ ಇಂಥ ಕೆಲಸ ಮಾಡಿದ್ದರೆ ಕಾನೂನು ಕ್ರಮ ತೆಗೆದುಕೊಳ್ಳುತ್ತದೆ, ಸಿಎಂ, ಡಿಸಿಎಂ ಗೃಹ ಇಲಾಖೆ ಹಸ್ತಕ್ಷೇಪ ಮಾಡೋದು ಒಳ್ಳೆಯದಲ್ಲ ಎಂದರು.