ಮಂಡ್ಯ:- ನಗರದ ಶಿಲ್ಪಶ್ರೀ ಆಸ್ಪತ್ರೆ ಬಳಿ ಬಿರುಗಾಳಿ ಸಮೇತ ಮಳೆಗೆ ಮರಬಿದ್ದು ಯುವಕ ಸಾವನ್ನಪ್ಪಿದ್ದಾನೆ.
Lokasabha Election: ಮತದಾನ ಪ್ರತಿಯೊಬ್ಬರ ಹಕ್ಕು.. ಎಲ್ಲರೂ ತಪ್ಪದೇ ಮಾಡಿ -ಬೊಮ್ಮಾಯಿ!
27 ವರ್ಷದ ಕಾರ್ತಿಕ್ ಮೃತ ಯುವಕ. ತನ್ನ ತಂದೆ ಆರೋಗ್ಯ ವಿಚಾರಿಸಿ ಆಸ್ಪತ್ರೆಯಿಂದ ವಾಪಸ್ ಆಗುವಾಗ ಈ ಘಟನೆ ನಡೆದಿದೆ. ಇಂದು ಬಿರುಗಾಳಿ ಸಮೇತ ಭಾರೀ ಮಳೆ ಬೀಳುತ್ತಿತ್ತು. ಹಾಗಾಗಿ ತನ್ನ ಬೈಕ್ ನಿಲ್ಲಿಸಿ ಕಾರ್ತಿಕ್ ಸ್ನೇಹಿತನ ಕಾರಲ್ಲಿ ಕುಳಿತಿದ್ದ. ಬೃಹತ್ ಮರದ ಕೆಳಗೆ ಕಾರು ನಿಂತಿತ್ತು. ಕಾರಿನ ಮೇಲೆ ಮರ ಬಿದ್ದಿದ್ದು ಕಾರ್ತಿಕ್ ಸಾವನ್ನಪ್ಪಿದ್ದಾನೆ. ಇನ್ನು, ಕಾರಲ್ಲಿದ್ದ ಕಾರ್ತಿಕ್ ಜೀವ ಕಳೆದುಕೊಂಡಿದ್ದು, ಹೊರಗೆ ನಿಂತಿದ್ದ ಸ್ನೇಹಿತ ಪ್ರಾಣಪಾಯದಿಂದ ಪಾರಾಗಿದ್ದಾನೆ. ನಾಳೆ ಕಾರ್ತಿಕ್ ಹುಟ್ಟುಹಬ್ಬ ಇತ್ತು. ಅದಕ್ಕಾಗಿ ಹೊಸ ಬಟ್ಟೆ ಖರೀದಿ ಮಾಡಿದ್ದ. ಸದ್ಯ ಸ್ಥಳಕ್ಕೆ ಪೊಲೀಸ್ರು ಆಗಮಿಸಿದ್ದು, ಕ್ರೇನ್ ಮೂಲಕ ತೆರವು ಕಾರ್ಯಾಚರಣೆ ಶುರು ಮಾಡಿದ್ದಾರೆ ಎನ್ನಲಾಗಿದೆ.