ಬೆಂಗಳೂರು: ಈ ಬಾರಿ ಮಾವಿನ ಇಳುವರಿ ಹೆಚ್ಚಿದ ಕಾರಣ ಮಾರುಕಟ್ಟೆಗೆ ಆವಕ ಹೆಚ್ಚಾಗಿದ್ದು, ಹಣ್ಣಿನ ದರ ಕಡಿಮೆಯಾಗಿದೆ. ಮಾವು ಪ್ರಿಯರಲ್ಲಿ ಸಂತಸ ತಂದಿದೆ. ಮಳೆ ಕೊರತೆ ಮತ್ತು ತಾಪಮಾನ ಹೆಚ್ಚಳ ಬಹುತೇಕ ಬೆಳೆಗಳಿಗೆ ನಷ್ಟ ಉಂಟುಮಾಡಿದ್ದರೆ ಮಾವಿನ ಬೆಳೆಗೆ ವರವಾಗಿದೆ. ಮಹಾರಾಷ್ಟ್ರ, ಕರ್ನಾಟಕ ಸೇರಿದಂತೆ ಮಾವು ಬೆಳೆಯುವ ಬಹುತೇಕ ಭಾಗಗಳಲ್ಲಿ ಇಳುವರಿ ಹೆಚ್ಚಾಗಿದೆ.
Car airbags: ನಿಮ್ಮ ಕಾರಿನಲ್ಲಿರುವ ಏರ್ʼಬ್ಯಾಗ್ ಅಸಲಿಯೋ, ನಕಲಿಯೋ ತಿಳಿಯುವುದೇಗೆ ಗೊತ್ತಾ..? ಈ ಸ್ಟೋರಿ ನೋಡಿ
ಬೆಳಗಾವಿ ಮಾರುಕಟ್ಟೆಗೆ ಮಹಾರಾಷ್ಟ್ರದ ರತ್ನಾಗಿರಿ ಆಪೂಸ್, ತುಮಕೂರು ಹಾಗೂ ಬೆಳಗಾವಿಯ ಮಾರಿಹಾಳದಲ್ಲಿ ಬೆಳೆಯುವ ಮಾವಿನ ಹಣ್ಣುಗಳು ಹೆಚ್ಚಾಗಿ ಬರುತ್ತವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮಾವಿನ ಹಣ್ಣಿನ ಆವಕ ದುಪ್ಪಟ್ಟಾಗಿದೆ ಎಂದು ಮಾವಿನ ವ್ಯಾಪಾರಿಗಳು ಹೇಳುತ್ತಾರೆ.
ಇಳಿದ ದರ:
ಕಳೆದ ವರ್ಷ ಮಾವಿನ ಹಣ್ಣಿನ ಇಳುವರಿ ಕಡಿಮೆಯಿದ್ದ ಕಾರಣ ಮಾರುಕಟ್ಟೆಗೆ ಆವಕವೂ ಕಡಿಮೆಯಾಗಿತ್ತು. ಸಗಟು ಮಾರುಕಟ್ಟೆಯಲ್ಲಿ ಮಹಾರಾಷ್ಟ್ರದ ರತ್ನಾಗಿರಿಯ ಆಪೂಸ್ ಮಾವಿನ ಹಣ್ಣು ಪ್ರತಿ ಡಜನ್ಗೆ 1100-2000 ರೂ.ವರೆಗೆ ದರವಿತ್ತು. ಈ ಬಾರಿ ರತ್ನಾಗಿರಿ ಆಪೂಸ್ ಪ್ರತಿ ಡಜನ್ಗೆ ಮಾರ್ಚ್ನಲ್ಲಿ700-1400 ರೂ.ವರೆಗೆ ದರವಿದ್ದರೆ, ಏಪ್ರಿಲ್ ತಿಂಗಳ ಅಂತ್ಯದಲ್ಲಿ600-1100 ರೂ.ಗೆ ಇಳಿದಿದೆ.
ಮಾವು ಪ್ರಿಯರಿಗೆ ಸಂತಸ:
‘ ಮಾವಿನ ಹಣ್ಣು ಖರೀದಿಸಿದಾಗ ದರ ಸ್ವಲ್ಪ ಹೆಚ್ಚಿತ್ತು. ಈಗ ದರ ಕಡಿಮೆಯಾಗಿದ್ದು ಹೆಚ್ಚು ಹಣ್ಣು ಖರೀದಿಸುತ್ತಿದ್ದೇವೆ’’, ಎಂದು ಬೆಳಗಾವಿಯ ಮಾರುಕಟ್ಟೆಯಲ್ಲಿಮಾವು ಖರೀದಿಸಿದ ಗ್ರಾಹಕರೊಬ್ಬರು ಹೇಳಿದರು. ಅಕ್ಷಯ ತೃತೀಯಾ ದಿನದಂದು ಹೋಳಿಗೆ ಜತೆ ಮಾವಿನ ಹಣ್ಣಿನ ರಸಾಯನ ಸವಿಯುವುದು ಸಂಪ್ರದಾಯವೂ ಆಗಿದೆ. ಈ ಬಾರಿ ದರ ಕಡಿಮೆ ಇರುವ ಕಾರಣ ಅಕ್ಷಯ ತೃತೀಯಾದಂದು ವ್ಯಾಪಾರ ಮತ್ತಷ್ಟು ಹೆಚ್ಚುವ ನಿರೀಕ್ಷೆ ಇದೆ ಎಂದು ಮಾವಿನ ವ್ಯಾಪಾರಿಗಳು ಹೇಳುತ್ತಾರೆ..