ಕೊಪ್ಪಳ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಾನು ಗೆಲ್ಲಲು ಸಿಎಂ ಸಿದ್ದರಾಮಯ್ಯ ಬೆಂಬಲಿಸಿದ್ದಾರೆ. ಅಸಲಿಗೆ, ನಾನು ಗಂಗಾವತಿಯಲ್ಲಿ ಗೆಲ್ಲಲು ಸಿದ್ದರಾಮಯ್ಯ ಹಾಗೂ ನನ್ನ ನಡುವೆ ಒಳಒಪ್ಪಂದ ನಡೆದಿತ್ತು ಗಂಗಾವತಿ ಶಾಸಕ ಜನಾರ್ದನ ರೆಡ್ಡಿಯವರು ಹೇಳಿದ್ದಾರೆ. ಗಂಗಾವತಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ರಾಜ್ಯದಲ್ಲಿ ಯಾರಿಗೂ ಸ್ಪಷ್ಟ ಬಹುಮತ ಬರುವುದಿಲ್ಲ ಎಂಬಂಥ ವಾತಾವರಣವಿತ್ತು. ಅಂಥ ಸಂದರ್ಭದಲ್ಲಿ, ಕಾಂಗ್ರೆಸ್ – ಬಿಜೆಪಿಯೇತರ ಅಭ್ಯರ್ಥಿಗಳನ್ನು ಸಿದ್ದರಾಮಯ್ಯನವರು ಸಂಪರ್ಕಿಸುವ ಕೆಲಸ ಮಾಡಿದ್ದರು.
BHEL Recruitment: ತಿಂಗಳಿಗೆ ₹ 95 ಸಾವಿರ ಸಂಬಳ..! BHELನಲ್ಲಿ ಬಂಪರ್ ಉದ್ಯೋಗಾವಕಾಶ – ಇಂದೇ ಅರ್ಜಿ ಸಲ್ಲಿಸಿ
ನನ್ನ ಹಾಗೂ ಸಿದ್ದರಾಮಯ್ಯನವರಿಗೆ ಬೇಕಾದವರಾದ ಕಾಮನ್ ಫ್ರೆಂಡ್ ಒಬ್ಬರನ್ನು ನನ್ನ ಬಳಿಗೆ ಕಳುಹಿಸಿದ್ದ ಸಿದ್ದರಾಮಯ್ಯ, ನನ್ನ – ನಿಮ್ಮ ನಡುವಿನ ಈವರೆಗಿನ ಎಲ್ಲಾ ರೀತಿಯ ವೈಮನಸ್ಸನ್ನು ಮರೆತುಬಿಡೋಣ. ಈಗ ಚುನಾವಣೆಯಲ್ಲಿ ನಾವು ನಿಮಗೆ ಸಹಕಾರ ಕೊಡುತ್ತೇವೆ. ನೀವೂ ನಮಗೆ ಸಹಕಾರ ಕೊಡಿ. ನಾವು ಇನ್ನು ಮೇಲೆ ಒಟ್ಟಿಗೇ ಕೈ ಜೋಡಿಸಿಕೊಂಡು ಹೋಗೋಣ ಎಂದು ಹೇಳಿ ಕಳಿಸಿದ್ದರು.
“ಅದೇ ಕಾರಣಕ್ಕಾಗಿಯೇ ಸಿದ್ದರಾಮಯ್ಯನವರು ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ, ಗಂಗಾವತಿ ಹಾಗೂ ಬಳ್ಳಾರಿಗೆ ಚುನಾವಣಾ ಪ್ರಚಾರಕ್ಕೆ ಬಂದಿರಲಿಲ್ಲ ಎಂದು ಅವರು ಹೇಳಿದ್ದಾರೆ. ಅಲ್ಲದೆ, ಚುನಾವಣೆಯ ನಂತರ ಒಂದು ವೇಳೆ ಸರ್ಕಾರ ರಚನೆಗೆ ಬೇಕಾದಷ್ಟು ಶಾಸಕರು ಕಾಂಗ್ರೆಸ್ಸಿನಿಂದ ಆರಿಸಿ ಬರದಿದ್ದರೆ ಅಂಥ ಸಂದರ್ಭದಲ್ಲಿ ಜನಾರ್ದನ ರೆಡ್ಡಿ ತಮಗೆ ನೆರವಾಗಬಹುದು ಎಂಬುದು ಸಿದ್ದರಾಮಯ್ಯನವರ ಲೆಕ್ಕಾಚಾರವಾಗಿತ್ತು” ಎಂದೂ ಅವರು ತಿಳಿಸಿದ್ದಾರೆ.