ಬಾಗಲಕೋಟೆ:- ದೇಶದ ಯುವಜನಾಂಗಕ್ಕೆ ಮೋದಿ ನಾಯಕತ್ವದ ಮೇಲೆ ಅಪಾರ ನಂಬಿಕೆ ಇದೆ, ಇಂದಿನ ಯುವ ಸಮೂಹ ಮೋದಿ ಬೆನ್ನಿಗಿದೆ, ಎಲ್ಲರೂ ಬಿಜೆಪಿಗೆ ಮತ ಹಾಕಿ ಮೋದಿಯವರ ಕೈ ಬಲಪಡಿಸೋಣ ಎಂದು ತಮಿಳುನಾಡಿ ಬಿಜೆಪಿ ರಾಜ್ಯಾಧ್ಯಕ್ಷ ಕೆ, ಅಣ್ಣಾಮಲೈ, ಹೇಳಿದರು.
ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿಯ ಶ್ರೀ ದಾನೇಶ್ವರಿ ಕಲ್ಯಾಣ ಮಂಟಪದಲ್ಲಿ ನಡೆದ ಬಾಗಲಕೋಟ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿ,ಸಿ, ಗದ್ದಿಗೌಡರ ಪರ ಪ್ರಚಾರ ಸಭೆಯಲ್ಲಿ ಭಾರತ ಮಾತಗೆ ಪುಷ್ಪ ನಮನ ಸಲ್ಲಿಸಿ, ಮತದಾರರ ಉದ್ದೇಶಿಸಿ ಮಾತನಾಡಿ
ಈಗಾಗಲೇ ಬಾಗಲಕೋಟ ಕ್ಷೇತ್ರಕ್ಕೆ ನಾಲ್ಕು ಬಾರಿ ಸಂಸದರಾಗಿ ಆಯ್ಕೆ ಹೆಮ್ಮೆಯ ಸಂಗತಿ, ಅವರು ಮಾಡಿರುವ ಅಭಿವೃದ್ಧಿ ಕಾರ್ಯಗಳೆ ಶ್ರೀರಕ್ಷೇ ಅವರಿಗೆ ಮತ್ತೊಮ್ಮೆ ಮತ ನೀಡಿ, ಆರ್ಶಿವಾದಸಿ ಪ್ರಧಾನಿ ನರೇಂದ್ರ ಮೋದಿ, ಯವರ ಕೈ ಬಲಪಡಿಸಬೇಕು ಎಂದರು,
ಬನಹಟ್ಟಿಯ ಪ್ರಮುಖ ರಸ್ತೆಯಲ್ಲಿ ನೂರಾರು ಬೈಕನೊಂದಿಗೆ ಬೃಹತ್ ರ್ಯಾಲಿಯು ನಗರದ ಪ್ರಮುಖ ರಸ್ತೆಗಳ ಮೂಲಕ ಸಂಚರಿಸಿ ರಾಮಪೂರ ಮಾರ್ಗವಾಗಿ ರಬಕವಿಯ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಸಮುದಾಯ ಭವನ ತಲುಪಿತು,
ಈ ಸಂದರ್ಭದಲ್ಲಿ ತೇರದಾಳ ಶಾಸಕ ಸಿದ್ದು ಸವದಿ, ಸೇರಿದಂತೆ ಜಿಲ್ಲಾ ಪದಾಧಿಕಾರಿಗಳು, ಮಂಡಲ ಪದಾಧಿಕಾರಿಗಳು, ಜಿಲ್ಲಾ ಪಂಚಾಯತ ಸದಸ್ಯರು, ತಾಲ್ಲೂಕು ಪಂಚಾಯತ ಸದಸ್ಯರು, ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಮಹಿಳಾ ಕಾರ್ಯಕರ್ತರು ಉಪಸ್ಥಿತರಿದ್ದರು.