ಕಲಬುರಗಿ: ಹಾಸನ ಸಂಸದರ ಲೈಂಗಿಕ ಹಗರಣ ಪ್ರಕರಣ ದೇಶದಲ್ಲಿ ಚರ್ಚೆ ಆಗ್ತಿದೆ. ರೇವಣ್ಣ ವಿಚಾರಣೆಗೆ ಬರದಿದ್ರೆ ಅರೆಸ್ಟ್ ಮಾಡೋ ಪ್ರಕ್ರಿಯೆ ನಡೆಯುತ್ತೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿಕೆ ನೀಡಿದ್ದಾರೆ. ಕಲಬುರಗಿಯಲ್ಲಿ ಮಾತನಾಡಿದ ಅವರು, ಆರೋಪಿಯು ವಿದೇಶಕ್ಕೆ ಹೋಗಿರುವ ವಿಷಯ ಗೊತ್ತಾಗು ತ್ತಿದ್ದಂತೆಯೇ ಎಲ್ಲ ಏರ್ಪೋರ್ಟ್ ಗಳಿಗೆ ಮಾಹಿತಿ ರವಾನಿಸಿರುವ ಎಸ್ ಐಟಿ ಅಧಿಕಾರಿಗಳು ಲುಕೌಟ್ ನೋಟಿಸನ್ನು ಜಾರಿ ಮಾಡಿದ್ದಾರೆ ಎಂದು ಹೇಳಿದರು.
ಉದ್ಯೋಗ ಆಕಾಂಕ್ಷಿಗಳೇ ಗಮನಿಸಿ.. BBMPಯಲ್ಲಿ 11,307 ಗ್ರೂಪ್ ಡಿ ಹುದ್ದೆಗಳು ಖಾಲಿ ಇದೆ..! ಇಂದೇ ಅರ್ಜಿ ಸಲ್ಲಿಸಿ
ಈ ನಡುವೆ ಪ್ರಜ್ವಲ್ ವಕೀಲ ಎಸ್ಐಟಿ ಗೆ ಪತ್ರವೊಂದನ್ನು ಬರೆದು ತಮ್ಮ ಕಕ್ಷಿದಾರ ಅವರ ಮುಂದೆ ಹಾಜರಾಗಲು 6 ದಿನಗಳ ಸಮಯ ಕೇಳಿದ್ದಾರೆ, ಆದರೆ ಕಾನೂನು ವ್ಯಾಪ್ತಿಯಲ್ಲಿ ಹಾಗೆ ಸಮಯಾವಕಾಶ ನೀಡಲು ಬರಲ್ಲ, ಅದರೂ ಅಧಿಕಾರಿಗಳು ಕಾನೂನು ಪರಿಣಿತರ ಸಲಹೆಯನ್ನು ಪಡೆಯುತ್ತಿದ್ದಾರೆ ಎಂದು ಪರಮೇಶ್ವರ್ ಹೇಳಿದರು. ಒಂದು ಪಕ್ಷ ಅವಕಾಶವಿಲ್ಲ ಅಂತಾದರೆ ಪೊಲೀಸ್ ಅಧಿಕಾರಿಗಳು ಪ್ರಜ್ವಲ್ ಅರೆಸ್ಟ್ ಮಾಡಿ ಭಾರತಕ್ಕೆ ತರಲು ಅವರಿರುವ ಸ್ಥಳಕ್ಕೆ ಹೋಗಲಿದ್ದಾರೆ ಎಂದು ಹೇಳಿದರು.