ಹಾವೇರಿ:- ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಪರ ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕ ಪ್ರದೀಪ್ ಈಶ್ವರ ಅಬ್ಬರದ ಮತಬೇಟೆ ಮಾಡಿದರು. ಹಾವೇರಿ ಜಿಲ್ಲೆ ಹಿರೇರೂರಿನಲ್ಲಿ ಕಾಂಗ್ರೇಸ್ ಅಭ್ಯರ್ಥಿ ಆನಂದಸ್ವಾಮಿ ಪರ ಬೃಹತ್ ರೋಡ್ ಶೋ ನಡೆಸಿದರು.
ಮಾಲೀಕರಿಂದ ಕಾರ್ಮಿಕರ ಮೇಲಿನ ಶೋಷಣೆ ನಿಲ್ಲಬೇಕು: ಗಾಂಧಿನಗರ ನಾರಾಯಣಸ್ವಾಮಿ!
ಇನ್ನು ರೋಡ್ ಉದ್ದೇಶಿ ಮಾತನಾಡಿದ ಕೈ ನಾಯಕರು ಹಾವೇರಿ ಲೋಕಸಭೆ ಕ್ಷೇತ್ರ ಗೆಲ್ಲುವ ಉತ್ಸಾಹದಲ್ಲಿ ಕೈ ನಾಯಕರು ಮಿಂಚಿನ ಪ್ರಚಾರ ಮಾಡ್ತಿದ್ದಾರೆ. ರಾಜ್ಯದ ಘಾನುಘಟಿ ಕಾಂಗ್ರೇಸ್ ನಾಯಕರು ಆನಂದಸ್ವಾಮಿ ಪರ ಮತ ಶಿಕಾರಿಗೆ ಇಳಿದ್ದಾರೆ. ಇನ್ನು ಕಾಂಗ್ರೇಸ್ ಆಭ್ಯರ್ಥಿ ಆನಂದಸ್ವಾಮಿ ಎದುರಾಳಿ ಯಾರೇ ಆದ್ರು ಸೋಲು ಖಚಿತವಾಗಿದೆ ಎಂದು ಮಾಜಿ ಸಿಎಂ ಬೊಮ್ಮಯಿ ವಿರುದ್ಧ ಪ್ರದೀಪ್ ಈಶ್ವರ್ ವಾಗ್ದಾಳಿ ಮಾಡಿದರು. ಇನ್ನು ಈವಾಗ ಅಧಿಕಾರದಲ್ಲಿರೋರು ಆ ಅಧಿಕಾರದಲ್ಲಿಯೇ ಇರಲಿ.
ಅಧಿಕಾರ ಇಲ್ದೆ ಇರೋರಿಗೆ ಈ ಬಾರಿ ಅಧಿಕಾರ ನೀಡಿ ಎಂದು ಶಾಸಕ ಪ್ರದೀಪ್ ಕಾಂಗ್ರೇಸ್ ಅಭ್ಯರ್ಥಿ ಆನಂದಸ್ವಾಮಿ ಮತಬೇಟೆ ಮಾಡಿದರು. ಈ ವೇಳೆ ಹಿರೇಕೆರೂರ ಶಾಸಕ ಯುಬಿ ಬಣಕಾರ್, ಸ್ಥಳೀಯ ಕೈ ಮುಖಂಡರು ಹಾಗೂ ನೂರಾರು ಕೈ ಕಾರ್ಯಕರ್ತರು ಭಾಗಿಯಾಗಿದ್ದರು…