ಬೆಂಗಳೂರು:- ಪ್ರಿಯತಮನೋರ್ವ ಗರ್ಲ್ಫ್ರೆಂಡ್ ಜೊತೆ ಚಾಟ್ ಮಾಡಿದ ಯುವಕನ ಕೈ ಕಟ್ ಮಾಡಿದ ಘಟನೆ ಜರುಗಿದೆ.
ಆ ಪ್ರಜ್ವಲ್ ರೇವಣ್ಣನ ಪಾಸ್ಪೋರ್ಟ್ ರದ್ದು ಮಾಡಿ – ಪ್ರಧಾನಿಗೆ ಪತ್ರ ಬರೆದ ಸಿದ್ದರಾಮಯ್ಯ..!
24 ವರ್ಷದ ಯುವಕ ಹರ್ಷಿತ್ ಮೇಲೆ ಶಶಾಂಕ್ ಮತ್ತು ಚಂದನ್ ಅಟ್ಯಾಕ್ ನಡೆಸಿದ್ದಾರೆ. ಚಾಮರಾಜಪೇಟೆ ನಿವಾಸಿ ಆಗಿರುವ ಆರೋಪಿ ಶಶಾಂಕ್ ಓರ್ವ ಯುವತಿಯನ್ನು ಲವ್ ಮಾಡ್ತಾ ಇದ್ದ. ಆದ್ರೆ ಅದೇ ಹುಡುಗೀಗೆ ಈ ಹರ್ಷಿತ್ ಕೂಡ ಚಾಟ್ ಮಾಡೋದು, ಕಾಲ್ ಮಾಡೋದು ಮಾಡ್ತಾ ಇದ್ದ. ಇದನ್ನೇ ಬೇರೆ ತರ ಊಹೆ ಮಾಡಿಕೊಂಡ ಶಶಾಂಕ್ ತನ್ನ ಸ್ನೇಹಿತ ಚಂದನ್ ಗೆ ವಿಚಾರ ಹೇಳಿದ್ದಾನೆ. ಬಳಿಕ ಇಬ್ಬರು ಕಂಠಪೂರ್ತಿ ಕುಡಿದು, ಅಮಲಿನಲ್ಲಿ ಹರ್ಷಿತ್ ಗೆ ಒಂದು ಗತಿ ಕಾಣಿಸಬೇಕು ಅಂತ ನಿರ್ಧಾರಕ್ಕೆ ಬಂದಿದ್ದಾರೆ.
ಹರ್ಷಿತ್ ತಂದೆ ಹೂವಿನ ಅಂಗಡಿ ಬಳಿ ಇರೋ ಮಾಹಿತಿ ಪಡೆದಿದ್ದೇ ಬೈಕ್ ನಲ್ಲಿ ಬಂದ ಶಶಾಂಕ್ ಹಾಗೂ ಚಂದನ್ ಲಾಂಗು ಮಚ್ಚಿನಿಂದ ಮನಸೋ ಇಚ್ಚೆ ಅಟ್ಯಾಕ್ ಮಾಡಿದ್ದಾರೆ. ಈ ವೇಳೆ ಕೈ ಅಡ್ಡ ಇಟ್ಟಿದ್ದರಿಂದ ಕೈ ಕಟ್ ಆಗಿದ್ದು ರಕ್ತಸ್ರಾವ ಆಗಿದೆ. ರಕ್ತಸ್ರಾವದ ಮಧ್ಯೆಯೂ ಕರ್ಚೀಪ್ ಕಟ್ಕೊಂಡೇ ಹರ್ಷಿತ್ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾನೆ.