ಚಿತ್ರದುರ್ಗ: ಪೈಶಾಚಿಕ ಕೃತ್ಯ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಗಲ್ಲಿಗೇರಿಸಬೇಕೆಂದು ವಕೀಲರಾದ ನರಹರಿ ಆಗ್ರಹಿಸಿದ್ದಾರೆ. ಅವರು ಚಿತ್ರದುರ್ಗದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತಾಡಿದರು. ಈ ಕೃತ್ಯದಿಂದಾಗಿ ಕ್ಷೇತ್ರಕ್ಕೆ ಮತ್ತು ರಾಜಕೀಯಕ್ಕೆ ಮಸಿ ಬಳಿದಂತಾಗಿದೆ. ನಾವು ಯಾವುದೇ ಪಕ್ಷ ಅಥವ ಪರ್ನಸನ್ ನ್ನು ಇಂಟರ್ ಪ್ರಿಟೇಟ್ ಮಾಡುತ್ತಿಲ್ಲ.
ಆದರೆ ನಾವು ನ್ಯಾಯದ ಪರ ಮಾತಾಡುತ್ತಿದ್ದೇವೆ. ಮಹಿಳೆಯ ಮೇಲೆ ದೌರ್ಜನ್ಯ ಮಾಡಿರುವ ಜೆಡಿಎಸ್ ಪಕ್ಷವು , ಪಕ್ಷದ ತೆನೆ ಹೊತ್ತ ಮಹಿಳೆಯ ಚಿನ್ಹೆಯನ್ನು ಬದಲಾಯಿಸಬೇಕು. ಅಪ್ರಾಪ್ತ ಈ ಪ್ರಕರಣದಲ್ಲಿ ಕಂಡು ಬಂದರೆ, ಪ್ರಜ್ವಲ್ ಮೇಲೆ ಸುಮೋಟೋ ಪ್ರಕರಣ ದಾಖಲು ಮಾಡಬೇಕು. ತಲೆ ತಪ್ಪಿಸಿಕೊಂಡು ಹೋಗಿರುವ ಪ್ರಜ್ವಲ್ ರೇವಣ್ಣ ಅವರನ್ನು ಕೂಡಲೇ ಬಂಧಿಸಿ, ತನಿಖೆ ಶುರು ಮಾಡಬೇಕು.
KEA Recruitment: PU ಪಾಸಾದವರಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ ಉದ್ಯೋಗಾವಕಾಶ.! ತಿಂಗಳಿಗೆ 42 ಸಾವಿರ ಸಂಬಳ
ಭಾರತೀಯ ಸಂಸ್ಕೃತಿಯಲ್ಲಿ ನಾರಿಯನ್ನು ಸಹೋದರಿ,ಯನ್ನಾಗಿ ಕಾಣುತ್ತೇವೆ. ಅಂತಹ ಮಹಿಳೆಯನ್ನು ಹೀನ ಕೃತ್ಯಕ್ಕೆ ಬಳಸಿಕೊಂಡಿರುವ ಸಂಸದರಿಗೆ ನಾಚಿಕೆಯಾಗಬೇಕು. ನೂರಾರು ಮಹಿಳೆಯರ ಮೇಲೆ ಕೃತ್ಯ ನಡೆಸಿದ್ದಾರೆ. ಈ ನೆಲ ಜಲ ಸಂಸ್ಕೃತಿಯನ್ನು ವಿದೇಶಿಯರು,ಬಹಳಷ್ಟು ಗೌರವಿಸುತ್ತಾರೆ. ಈ ಕೃತ್ಯದಿಂದ ಇಡೀ ಹೆಣ್ಣು ಕುಲಕ್ಕೆ ಮಸಿ ಬಳಿದಂತಾಗಿದೆ. ಇದರಿಂದ ದೇಶದ ಮಹಿಳೆಯರು, ಮಹಿಳಾ ಸಂಘಟನೆಗಳು ಸಂಸದರನ್ನು ಗಲ್ಲಿಗೇರಿಸಬೇಕೆಂದು, ಒಕ್ಕೊರಲಿನಿಂದ ಧ್ವನಿ ಎತ್ತಬೇಕು.
ಇಂತಹ ಕೃತ್ಯ ಮಾಡಲು ಬೇರೆಯವರು ಭಯ ಪಡಬೇಕು. ಮಹಿಳೆಯರಿಗೆ ನ್ಯಾಯ ಕೊಡಿಸಲು ಹೋರಾಡುತ್ತಿದ್ದರೆ.ಇವರು ಇಂತಹ ಕೃತ್ಯಮಾಡಿದ್ದು, ಯಾರನ್ನು ನಂಬಬೇಕು, ಎಸ್ ಐಟಿ ತಂಡವು, ತನಿಖೆಯನ್ನು ಚುರುಗೊಳಿಸ ಬೇಕು. ಸಂತ್ರಸ್ತ ಮಹಿಳೆಯರ ಜೀವನ ಏನಾಗಬೇಕು. ಸರ್ಕಾರ ಹಾಗೂ ಎಸ್ ಐಟಿ ತಂಡ ಕೂಡಲೇ ಪ್ರಜ್ವಲ್ ರೇವಣ್ಣ ಅವರನ್ನು ಬಂಧಿಸಿ ಕರೆ ತಂದು ಶಿಕ್ಷೆ ಕೊಡಿಸಬೇಕೆಂದು ಮನವಿ ಮಾಡಿದರು.