ಆನೇಕಲ್: ಬಿರುಬಿಸಿಲಿನ ಬೇಗೆಗೆ ರಾಜ್ಯಾದ್ಯಂತ ನೀರಿಗಾಗಿ ಹಾಹಾಕಾರ ಶುರುವಾಗಿದ್ದು, ಹನಿಹನಿ ನೀರಿಗೂ ಜನರು ಪರಿತಪಿಸುತ್ತಿದ್ದಾರೆ. ಆದ್ರೆ ಇಲ್ಲೊಂದೆಡೆ ಬಿಜೆಪಿ ಮುಖಂಡನೋರ್ವ ಗ್ರಾಮ ಪಂಚಾಯತಿ ಅನುಮತಿ ಪಡೆಯದೆ ನೀರಿನ ಪೈಪ್ ತೋಡಿ ಪೈಪ್ ಲೈನ್ ಒಡೆದು ಹಾಕಿದ್ದ. ಇದನ್ನು ಪ್ರಶ್ನಿಸಿದ ವಾಟರ್ ಮ್ಯಾನ್ ಮೇಲೆ ಹಲ್ಲೆ ನಡೆಸಿ ಗೂಂಡಾ ವರ್ತನೆ ತೋರಿದ್ದಾನೆ.. ಅಷ್ಟಕ್ಕೂ ಈವೊಂದು ಘಟನೆ ನಡೆದಿದ್ದಾದ್ರು ಎಲ್ಲಿ ಅಂತೀರಾ ನೋಡಿ ಈ ರಿಪೋರ್ಟ್ ನಲ್ಲಿ…
ಹೌದು ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಕಲ್ಲುಬಾಳು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೋನಸಂದ್ರ ಗ್ರಾಮದಲ್ಲಿ ವಾಟರ್ಮ್ಯಾನ್ ಮೇಲೆ ಬಿಜೆಪಿ ಮುಖಂಡನಿಂದ ಹಲ್ಲೆ ನಡೆಸಿದ ಘಟನೆ ನಡೆದಿದೆ. ಮಹದೇವಯ್ಯ (55) ಹಲ್ಲೆಗೊಳಗಾದ ವಾಟರ್ ಮ್ಯಾನ್ ಆಗಿದ್ದಾನೆ. ಗ್ರಾಮ ಪಂಚಾಯತಿ ಅನುಮತಿ ಪಡೆಯದೆ ನೀರಿನ ಪೈಪ್ ತೋಡಿದ್ದ ಬಿಜೆಪಿ ಮುಖಂಡ ನವೀನ್ ಎಂಬಾತ, ಪೈಪ್ ಲೈನ್ ಒಡೆದು ಹಾಕಿದ್ದರು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ವಾಟರ್ ಮ್ಯಾನ್ ಮಹದೇವಯ್ಯ ಈ ಕುರಿತು ಪ್ರಶ್ನಿಸಿದ್ದಾನೆ. ಈ ವೇಳೆ ಬಿಜೆಪಿ ಮುಖಂಡ ನವೀನ್ ಮತ್ತು ಆತನ ಸಹೋದರ ಚೇತನ್ ಏಕಾಏಕಿ ಪ್ರಾಣ ಬೆದರಿಕೆ ಹಾಕಿ ವಾಟರ್ ಮ್ಯಾನ್ ಮಹದೇವಯ್ಯನ ಹೊಟ್ಟೆ ಹಾಗೂ ಮರ್ಮಾಂಗಕ್ಕೆ ಹಲ್ಲೆ ನಡೆಸಿದ್ದಾರೆ.
ಇನ್ನೂ ಕುಡಿಯುವ ನೀರನ್ನು ಕಟ್ಟಡ ನಿರ್ಮಾಣಕ್ಕೆ ಬಳಕೆ ಮಾಡುವಂತಿಲ್ಲ ಎಂದು ಸರ್ಕಾರದ ಸ್ಪಷ್ಟ ಆದೇಶವಿದ್ದರು ಯಾವುದೇ ಪೂರ್ವಾನುಮತಿ ಇಲ್ಲದೆ ಕುಡಿಯುವ ನೀರಿನ ಪೈಪ್ ಹೊಡೆದ ನವೀನ್ ಮತ್ತೊಂದು ಪೈಪ್ ಲೈನ್ ಅಳವಡಿಸಿಕೊಳ್ಳಲು ಮುಂದಾಗಿದ್ದ. ಕುಡಿಯುವ ನೀರಿನ ಪೈಪ್ ಹೊಡೆದಿದ್ದನ್ನು ಪ್ರಶ್ನಿಸಿದಕ್ಕೆ ವಾಟರ್ ಮ್ಯಾನ್ ಮಹದೇವಯ್ಯ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಹಿಂದೆಯೂ ಸಹ ಮಹದೇವಯ್ಯ ಮಗ ಹಾಗೂ ಕುಟುಂಬದವರು ಕಾಂಗ್ರೇಸ್ ಪರವಾಗಿ ಕೆಲಸ ಮಾಡುತ್ತಿದ್ದರು ಎನ್ನುವ ವಿಚಾರಕ್ಕೆ ಬಿಜೆಪಿ ಮುಖಂಡ ನವೀನ್ ಇಲ್ಲಸಲ್ಲದ ವಿಚಾರವಾಗಿ ಕಿರಿಕ್ ತೆಗೆಯುತ್ತಿದ್ದನಂತೆ. ಹಲ್ಲೆಯ ವಿಚಾರ ತಿಳಿದ್ರು ಸಹ ವಾಟರ್ ಮ್ಯಾನ್ ಗೆ ರಕ್ಷಣೆ ನೀಡಬೇಕಾದ ಕಲ್ಲುಬಾಳು ಗ್ರಾಮ ಪಂಚಾಯತಿ ಪಿಡಿಓ ಲಕ್ಷ್ಮೀನಾರಾಯಣ ನೆಪ ಮಾತ್ರಕ್ಕೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಹೋಗಿದ್ದ ಪ್ರಾಣ ಭಯದಲ್ಲಿ ಮಹದೇವಯ್ಯ ಕುಟುಂಬ ಪೊಲೀಸ್ ಠಾಣೆಗೆ ಅಳೆಯುವಂತಾಗಿದೆ.
ಇನ್ನೂ ಸರ್ಕಾರಿ ನೌಕರನ ಮೇಲೆ ಹಲ್ಲೆ ಮಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿರುವುದರ ಜೊತೆಗೆ ಪ್ರಾಣ ಬೆದರಿಕೆ ಇರುವುದಾಗಿ ವಾಟರ್ ಮ್ಯಾನ್ ಮಹದೇವಯ್ಯ ರಕ್ಷಣೆ ಕೋರಿ ಜಿಗಣಿ ಪೊಲೀಸ್ ಠಾಣೆಯಲ್ಲಿ FIR ದಾಖಲು ಮಾಡಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಜಿಗಣಿ ಪೊಲೀಸರು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸುತ್ತಾರ ಎಂದು ಕಾದು ನೋಡಬೇಕಿದೆ.