ಹಾವೇರಿ: ನೇಹಾ ಹತ್ಯೆ ಪರ್ಸನಲ್ ವಿಚಾರ ಅಂತ ಹೋಮ್ ಮಿನಿಸ್ಟರ್ ಹೇಳ್ತಾರೆ. ಅವರನ್ನು ಬ್ರದರ್ಸ್ ಅಂತ ಹೇಳೋ ಡಿಸಿಎಂ ಇದ್ದಾರೆ. ದಾಳಿಗೊಳಗಾಗ್ತಿರೋರು. ಹಿಂದೂಗಳು ಹೀಗಾಗಿ ಧ್ವನಿ ಎತ್ತಿದ್ದೇವೆ ಎಂದು ಪ್ರತಾಪ್ ಸಿಂಹ ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೇಹಾ ವಿಚಾರ ಬಂದಾಗ ಸಿಎಂ ಏನು ಹೇಳಿದರು? ತಪ್ಪು ತಪ್ಪೇ ನಾವು ಕ್ರಮ ತಗೊತೀವಿ ಅನ್ನಬಹುದಿತ್ತಲ್ಲವಾ?
ಇವರ ಮನೆಯವರಿಗೆ ಚುಚ್ಚಿ ಸಾಯಿಸಿದರೆ ವೈಯಕ್ತಿಕ ವಿಚಾರ ಆಗುತ್ತಾ? ಹಿಂದೆ ರಾಜು ಮರ್ಡರ್ ಆದಾಗ ಸಿದ್ದರಾಮಯ್ಯ ಅವರ ಮನೆಗೆ ಹೋದರಾ? ರಾಜು ಲಿಂಗಾಯತ ಅನ್ನೋ ಕಾರಣಕ್ಕೆ ಮನೆಗೆ ಹೋಗಲಿಲ್ಲವಾ? ಮಾಧ್ಯಮಗಳಲ್ಲಿ ಬಂದು ಟೀಕೆ ಆದ ಮೇಲೆ ಕಣ್ಣೊರಸುವ ಪ್ರಯತ್ನ ಮಾಡ್ತಾರೆ ಎಂದು ಆರೋಪಿಸಿದರು.
Raw banana: ಸಿಹಿಯಾದ ಬಾಳೆಹಣ್ಣು ಮಾತ್ರವಲ್ಲ ಬಾಳೆಕಾಯಿ ಕೂಡ ಆರೋಗ್ಯಕ್ಕೆ ಉತ್ತಮ!
ಇದಕ್ಕಿಂತ ಸ್ಪಷ್ಟವಾಗಿ ನಾನು ಏನು ಹೇಳೋದು ಗೊತ್ತಿಲ್ಲ. ನೇಹಾ ಹಿರೇಮಠ ವಿಚಾರದಲ್ಲಿ ಹಗಲಿನಲ್ಲಿ ಮರ್ಡರ್ ಮಾತ್ರ ಅಲ್ಲ. ಅದರ ಹಿಂದಿನ ಇಂಟೆನ್ಷನ್ ನೋಡಿ. ಬೆಂಗಳೂರಲ್ಲಿ ಹನುಮಾನ್ ಚಾಲಿಸಾ ಪ್ಲೇ ಮಾಡಿದರೆ ಹಲ್ಲೆ ಮಾಡಿದರು. ಮೈಸೂರಿನಲ್ಲಿ ಮೋದಿಯವರ ಬಗ್ಗೆ ಹಾಡು ಬರೆದಿದ್ದಕ್ಕೆ ಹೊಡೆದರು ಎಂದು ಆಕ್ರೋಶ ವ್ಯಕ್ತಪಡಿಸಿದರು.