ರಾಯಚೂರು:- ಪ್ರಜ್ವಲ್ ರೇವಣ್ಣ ಖಾಸಗಿ ವಿಡಿಯೋ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕ ತನ್ವೀರ್ ಸೇಠ್ ಪ್ರತಿಕ್ರಿಯೆ ನೀಡಿದ್ದಾರೆ.
ನನಗೊಮ್ಮೆ ಅವಕಾಶ ಕೊಡಿ.. ಏಕಾಂಗಿಯಾಗಿ ಪ್ರಚಾರ ಮಾಡಿದ ಪಕ್ಷೇತರ ಅಭ್ಯರ್ಥಿ..
ಈ ಸಂಬಂಧ ರಾಯಚೂರಿನಲ್ಲಿ ಮಾತನಾಡಿದ ಅವರು, ಮಹಿಳೆಯರಿಗೆ ದೌರ್ಜನ್ಯ ಕಿರುಕುಳ ಕೊಟ್ಟಿರುವುದು ,ಎಸ್ ಐಟಿ ತನಿಖೆ ಆಧಾರದಡಿ ಕ್ರಮ ತೆಗೆದುಕೊಳ್ಳುತ್ತೇವೆ. ಮಹಿಳೆಯರ ರಕ್ಷಣೆಗೆ ಸಮಾಜದಲ್ಲಿ ಮಾನವೀಯತೆ ಇರುನನಪರು ಇರಬೇಕು. ಲಘುವಾಗಿ ಮಹಿಳೆಯರನ್ನು ತೆಗೆದುಕೊಳ್ಳುವ ಹಾಗಿಲ್ಲ. ನಮಗೆ ಆಘಾತ ಆಗಿದೆ. ಇಷ್ಟೊಂದು ಮಹಿಳೆಯರಿಗೆ ಕಿರುಕುಳ ಕೊಟ್ಟಿರೋದು ಅವರಿಗೆ ಸರಿಯಾದ ಶಿಕ್ಷೆ ಆಗಬೇಕು. ಒಂದು ಅತ್ಯಾಚಾರ ಆದ್ರೂ ತಪ್ಪು ತಪ್ಪೇ. ಸಂಸದ ಸ್ಥಾನಕ್ಕೆ ಇದು ಅಗೌರವ ಎಂದು ಅಭಿಪ್ರಾಯಪಟ್ಟರು.
ಇನ್ನೂ ಸುಳ್ಳು ಹೇಳೋದ್ರಲ್ಲಿ ವಿಶ್ವಗುರು ಬಸನಗೌಡ ಪಾಟೀಲ್ ಯತ್ನಾಳ”-ಇದು ರಂಜಾನ್, ರೋಜಾ ಮಾಡುವವರಿಗೆ ಮಾತ್ರ ಕಾಂಗ್ರೆಸ್ ಟಿಕೆಟ್ ಕೊಡುತ್ತದೆ ಎಂಬ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಿಲ್ ಯತ್ನಾಳ್ ಅವರ ಹೇಳಿಕೆಗೆ ಶಾಸಕ ತನ್ವೀರ್ ಸೇಠ್ ತಿರುಗೇಟು ನೀಡಿದ್ದಾರೆ.
ಇಲ್ಲಿ ಮತದಾರರೇ ಪ್ರಭುಗಳು. ಸೇವಕನನ್ನ ಆಯ್ಕೆ ಮಾಡೋರು ಜನರು. ಮತ ಹಾಕುವ ಹಕ್ಕಿನ ಮೂಲಕ ಆಯ್ಕೆ ಮಾಡಬೇಕಾಗುತ್ತೆ. ಯತ್ನಾಳ್ ಯಾವ ಪಕ್ಷದಲ್ಲಿ ಇದ್ದಾರೆ ಅಂತಾ ಸಂಶಯ ಬರುತ್ತದೆ. ಯಡಿಯೂರಪ್ಪ ವಿರುದ್ಧ ಟೀಕೆ ಮಾಡ್ತಾರ . ಅವರ ಪಕ್ಷದ ವಿರುದ್ಧವೂ ಮಾತಾಡುತ್ತಾರೆ ಎಂದು ಟೀಕಿಸಿದರು.
ಬಿಜೆಪಿ ಅವರು ಕಳೆದ 10 ವರ್ಷದಿಂದ ಅಧಿಕಾರದಲ್ಲಿ ಇದ್ದರೂ ಯಾವುದೇ ಅಭಿವೃದ್ಧಿ ಮಾಡದೆ ಕೇವಲ ಜನರ ಭಾವನೆ ಕೆರಳಿಸಿ ಮತ ಕೇಳುತ್ತಿದೆ. ನಾವು ಮಾನವೀಯತೆ ಮರೆತು ಏನೂ ಮಾಡಿಲ್ಲ. ನಿಮ್ಮ ಮಂಗಳ ಸೂತ್ರದ ಬಗ್ಗೆ ಮಾತಾಡ್ತಾರೆ.ಕೇವಲ ಜನರ ಭಾವನೆ ಕೆರಳಿಸಿ ಮತ ಪಡೆಯೋದು ಬಿಜೆಪಿ ವೈಖರಿ . ಕೇಂದ್ರ ಬಿಜೆಪಿ ಸರ್ಕಾರ ಹತ್ತು ವರ್ಷದ ಆಡಳಿತದಲ್ಲಿ ಏನೂ ಕಾರ್ಯಕ್ರಮ ಮಾಡಿಲ್ಲ ಆದರೆ ಜನರ ಭಾವನೆ ಕೆರಳಿಸುವ ಮೂಲಕ ಮತ ಕೇಳ್ತಾರೆ ಎಂದು ಆರೋಪಿಸಿದರು.
ಇನ್ನೂ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನಕ್ಕೆ ಸಂತಾಪ ಸೂಚಿಸಿದ ಅವರು, ಶ್ರೀನಿವಾಸ ಪ್ರಸಾದ್ ಅವರ ಅಗಲುವಿಕೆ ಬೇಸರ ತಂದಿದೆ. ಅವರು ಸಾಮಾಜಿಕ ಕಳಕಳಿ ಬದ್ಧತೆ ಇರುವವರು. ಅಪಾರ ಸಂಖ್ಯೆಯ ಅಭಿಮಾನಿಗಳಿಗೆ, ಕುಟುಂಬದವರಿಗೆ
ನೋವು ಭರಿಸುವ ಶಕ್ತಿ ದೇವರು ನೀಡಲಿ.ಅವರ ಸಾವಿನಿಂದ ನಮಗೆ ನೋವಾಗಿದೆ ಎಂದು ಹೇಳಿದರು