ಬಾಗಲಕೋಟೆ:- ನನಗೊಮ್ಮೆ ಅವಕಾಶ ಕೊಡಿ ಎಂದು ಹೇಳುವ ಮೂಲಕ ಏಕಾಂಗಿಯಾಗಿ ಪಾದಯಾತ್ರೆ ಮೂಲಕ ಜಿಲ್ಲೆಯ ತುಂಬಾ ಪಕ್ಷೇತರ ಅಭ್ಯರ್ಥಿ ನಾಗರಾಜ್ ಕಲಕೂಟಗರ ಮತಯಾಚನೆ ಮಾಡಿದ್ದಾರೆ.
ಭಾರತ ದೇಶದ 2024 ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಮ್ಮ ಪರವಾಗಿದೆ ನಮ್ಮ ಪರವಾಗಿದೆ ಎಂದು ಹೇಳುತ್ತಿದ್ದಾರೆ ಹೊರತು ಅಭಿವೃದ್ಧಿಯ ಬಗ್ಗೆ ಹೇಳ್ತಾ ಇಲ್ಲ.
ನಾನು ವಿದ್ಯಾವಂತನಿದ್ದೇನೆ ಬಾಗಲಕೋಟೆ ಜಿಲ್ಲೆಯ ಮತದಾರರು ನನಗೆ ಅವಕಾಶ ಮಾಡಿಕೊಡಿ ಲೋಕಸಭಾ ಸದನದಲ್ಲಿ ಬಾಗಲಕೋಟೆ ಜಿಲ್ಲೆ ಅಭಿವೃದ್ಧಿಗೆ ಧ್ವನಿ ಎತ್ತಿ ನಿಮ್ಮ ಪ್ರಾಮಾಣಿಕತೆ ಸೇವೆ ಮಾಡುತ್ತೇನೆ
ನನ್ನ ಹತ್ತಿರ ಯಾವ ಗಾಡಿಯೂ ಇಲ್ಲ ಹಣವು ಇಲ್ಲ ನನ್ನ ಹತ್ತಿರಾ ಇರೋದು ಒಂದೇ ವಿದ್ಯೆ.
ನನ್ನಹತ್ತಿರಾ ಇರೋದು ನನ್ನ ಎರಡು ಕಾಲಿನ ಗಾಡಿ ಪಾದಯಾತ್ರೆ ಮುಖಾಂತರ ಬಾಗಲಕೋಟೆ ಜಿಲ್ಲೆಯ ಮುಧೋಳ. ಬೀಳಗಿ. ರಬಕವಿ ಬನಹಟ್ಟಿ. ಜಮಖಂಡಿ. ತೇರದಾಳ ಹಿಗೇ ಹಲವಾರು ಊರುಗಳಲ್ಲಿ ಪಾದಯಾತ್ರೆ ಮುಖಾಂತರ ಮತದಾರಿಗೆ ಭೇಟಿ ಕೊಟ್ಟು ಮತವನ್ನು ಕೇಳುತ್ತಿದ್ದೇನೆ.
ಕಾಂಗ್ರೆಸ್ ಬಿಜೆಪಿ ಜಗಳದಲ್ಲಿ ಮತದಾರರು ನನಗೆ ಆಶೀರ್ವಾದ ಮಾಡುತ್ತಾರೆ ಎಂದು ಬಾಗಲಕೋಟೆ ಪಕ್ಷೇತರ ಅಭ್ಯರ್ಥಿ ನಾಗರಾಜ ಕಲಕೂಟಗರ ಹೇಳಿದರು.
ಪ್ರಕಾಶ ಕುಂಬಾರ
ಬಾಗಲಕೋಟೆ